ಜೀವನಯಾನ

Saturday, November 12, 2016

ಸುಂದರಬನ!

ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕೆಂದರೆ ಈ ಸುಂದರಬನವನ್ನು ಒಮ್ಮೆಯಾದರೂ ನೋಡಲೇಬೇಕು. ಅಷ್ಟೊಂದು ನಯನ ಮನೋಹರ ಈ ಅರಣ್ಯ! ಸುಂದರ್ಬನ್ಸ್ ಅಥವಾ ಸುಂದರಬನ ವಿಶ್ವದ ಅತಿ ವಿಸ್ತಾರವಾದ ಮ್ಯಾಂಗ್ರೋವ್ ಅರಣ್ಯ ಎನಿಸಿಕೊಂಡಿದೆ. ಇಲ್ಲಿ ಎಲ್ಲಿ ಕಣ್ಣು ಹೊರಳಿಸಿದರೂ ಅಚ್ಚಹಸಿರೇ ಕಾಣಿಸುತ್ತದೆ. ಗಂಗಾ ನದಿ ಸಮುದ್ರವನ್ನು ಸೇರುವ ಮುಖಜ ಭೂಮಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ ಸುಂದರಬನ ವಿಸ್ತಾರವಾಗಿ ಹರಡಿಕೊಂಡಿದೆ. ಸಾಗರದಂಚಿನಲ್ಲಿ ವ್ಯಾಪಿಸಿರುವ ಸುಂದರಬನದ  ಒಟ್ಟು ವಿಸ್ತೀರ್ಣ 10 ಸಾವಿರ ಚದರ ಕಿ.ಮೀ. ಬನದ ಹೆಚ್ಚಿನ ಭಾಗ  ಬಾಂಗ್ಲಾದೇಶಕ್ಕೆ ಸೇರಿದ್ದರೆ, ಶೇ.40ರಷ್ಟು ಅರಣ್ಯ ಮಾತ್ರ ಭಾರತದಲ್ಲಿದೆ. ಸುಂದರ್ಬನ್ಸ್ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಲ್ಪಟ್ಟಿದೆ. ಸುಂದರಬನದ ಅರ್ಥ ಸುಂದರವಾದ ಕಾಡು ಎಂಬುದಾಗಿದೆ. ಈ ಪ್ರದೇಶದಲ್ಲಿ ಹೆಚ್ಚಾಗಿ ಕಾಣಸಿಗುವ ಸುಂದರಿ ಮರಗಳಿಂದ ಈ ಹೆಸರು ಬಂದಿದೆ.

ಬಂಗಾಳ ಹುಲಿಗಳ ತವರು:
ಸುಂದರಬನವು ಅತಿ ವಿಸ್ತಾರವಾದ ಕಡಲ್ಗಾಲುವೆಯನ್ನು ಹೊಂದಿದೆ. ಜತೆಗೆ ಬಂಗಾಳ ಹುಲಿಗಳ ತವರು. ಜಿಂಕೆ, ಮೊಸಳೆ, ಉರಗಳು ಮತ್ತು ಹತ್ತುಹಲವು ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ. ಇಲ್ಲಿ ಸುಮಾರು 500 ಹುಲಿಗಳು ಇವೆ ಎಂದು ಅಂದಾಜಿಸಲಾಗಿದೆ. ಸುಂದರ್ಬನ್ಸ್ ನ್ಯಾಷನಲ್ ಪಾರ್ಕ್ ಅನ್ನು ರಾಷ್ಟ್ರೀಯ ಹುಲಿ ಸಂರಕ್ಷಿತ  ಅರಣ್ಯ ಎಂದು ಗುರುತಿಸಲಾಗಿದೆ.


ಬೋಟ್ನಲ್ಲಿ ಸಫಾರಿ
ಭಾರತದ ಭಾಗದಲ್ಲಿರುವ ಸುಂದರ್ಬನ್ಸ್ ಅರಣ್ಯ 4000 ಚದರ ಕಿ.ಮೀ.ಯಷ್ಟು ವಿಸ್ತಾರವಾಗಿದ್ದು, 54 ಚಿಕ್ಕಪುಟ್ಟ ದ್ವೀಪ ಸಮೂಹಗಳಿವೆ. ಇಲ್ಲಿನ ಮ್ಯಾಂಗ್ರೋವ್ ಅರಣ್ಯಗಳು ಸಮುದ್ರದ ಉಪ್ಪು ನೀರನ್ನು ಹೀರಿಕೊಂಡು ಬೆಳೆಯುತ್ತವೆ. ಮೊಘಲ್ ಸಾಮ್ರಾಜ್ಯದ ಕಾಲದಲ್ಲಿ ಇಲ್ಲಿನ ಅರಸರು ಸುಂದರಬನವನ್ನು ಗುತ್ತಿಗೆ ನೀಡುತ್ತಿದ್ದರು. 1757ರಲ್ಲಿ ಮೊಘಲ್ ಸಾಮ್ರಾಟ ಆಲಂಗೀರನಿಂದ ಈಸ್ಟ್ ಇಂಡಿಯಾ ಕಂಪನಿ ಸುಂದರಬನವನ್ನು ಗುತ್ತಿಗೆ ಪಡೆಯಿತು. ಮುಂದೆ 1860ರಲ್ಲಿ ಬಂಗಾಳ ಪ್ರಾಂತ್ಯದಲ್ಲಿ ಅರಣ್ಯ ಇಲಾಖೆ ಸ್ಥಾಪನೆಯಾಗಿ ಸುಂದರಬನದ ವ್ಯವಸ್ಥಿತ ನಿರ್ವಹಣೆ ಸಾಧ್ಯವಾಯಿತು. ಉಳಿದ ಸಫಾರಿಗಳಂತಲ್ಲದೇ, ಬೋಟ್ ಮತ್ತು ಫೆರ್ರಿಗಳ ಮೂಲಕ ಸಫಾರಿಯ ಆನಂದವನ್ನು ಇಲ್ಲಿ ಅನುಭವಿಸಬಹುದು.

ಅತಿದೊಡ್ಡ ನದಿಮುಖಜ ಭೂಮಿ:
ಸುಂದರಬನ ಹಿನ್ನೀರಿನ ಮೀನುಗಾರಿಕೆಗೆ ಪ್ರಸಿದ್ಧವಾಗಿದೆ. ಸುಮಾರು 50 ಹೆಕ್ಟೇರ್ ಪ್ರದೇಶದಲ್ಲಿ ಮೀನು ಉತ್ಪಾದನೆಯನ್ನು ಮಾಡಲಾಗುತ್ತದೆ. ಭಾರತದ ಅತಿದೊಡ್ಡ ಮೀನು ಉತ್ಪಾದನಾ ಮಂಡಳಿಗಳಲ್ಲಿ ಸುಂದರ್ಬನ್ಸ್ ಕೂಡ ಒಂದಾಗಿದೆ. ಸುಂದರಬನ ವಿಶ್ವದ ಅತಿದೊಡ್ಡ ನದಿ ಮುಖಜಭೂಮಿ ಭೂಮಿ ಕೂಡ ಹೌದು. ಗಂಗಾ  ಮತ್ತು ಬ್ರಹ್ಮಪುತ್ರ ನದಿಗಳು ಒಟ್ಟುಗೂಡುವ ಈ ಪ್ರದೇಶ ಬಂಗಾಳ ನಡುಗಡ್ಡೆ ಎಂದು ಹೆಸರಾಗಿದೆ. 1330 ಚದರ ಕಿ.ಮೀ.ಯಷ್ಟು ನದಿ ಮುಖಜಭೂಮಿಯನ್ನು ಈ ಪ್ರದೇಶ ಒಳಗೊಂಡಿದೆ. ಸುಂದರಬನದಲ್ಲಿ 245 ಸಸ್ಯವಂಶಗಳಿಗೆ ಸೇರಿದ 334 ತಳಿಗಳ ಮರಗಳನ್ನು ಗುರುತಿಸಲಾಗಿದೆ. ಸುಂದರಬನವನ್ನು ತೇವಭರಿತ ಉಷ್ಣವಲಯದ ಕಾಡೆಂದು ವrniಸಲಾಗುತ್ತದೆ. ಸುಂದರಬನದಲ್ಲಿ ಪ್ರಾಣಿವೈವಿಧ್ಯ ವ್ಯಾಪಕವಾಗಿದೆ. ಬಂಗಾಳದ ಹುಲಿ ಮತ್ತು ಡಾಲ್ಫಿನ್ಗಳು ಬಲು ಪ್ರಸಿದ್ಧ. ಇಲ್ಲಿ ಹಲವು ವನ್ಯಧಾಮಗಳನ್ನು ರಚಿಸಲಾಗಿದ್ದು, ಬೇಟೆ ಮತ್ತು ಅರಣ್ಯ ಉತ್ಪನ್ನಗಳ  ಸಂಗ್ರಹವನ್ನು ನಿಷೇಧಿಸಲಾಗಿದೆ.

ಛಾಯಾಗ್ರಾಹಕರ ಸ್ವರ್ಗ
ಸುಂದರಬನ ತನ್ನ ಸೌಂದರ್ಯದಿಂದ ಛಾಯಾಗ್ರಾಹಕರ ಸ್ವರ್ಗ ಎನಿಸಿಕೊಂಡಿದೆ. ಹಲವಾರು ವಲಸೆ ಹಕ್ಕಿಗಳಿಗೆ ಸುಂದರ್ಬನ್ಸ್ ಅರಣ್ಯ ಆಶ್ರಯ ತಾಣವಾಗಿದೆ. ಹಳದಿ ದಾಸರಿ ಹಕ್ಕಿ, ವುಡ್ ಸ್ಯಾಂಡ್ಪೈಪರ್, ಯುರೇಷಿಯನ್ ಗೋಲ್ಡ್ ಒರಿಯೋಲ್ ಹಕ್ಕಿಗಳು ಇಲ್ಲಿಗೆ ವಲಸೆ ಬರುತ್ತವೆ. ಅವುಗಳನ್ನು ಕ್ಯಾಮರಾ ಕಣ್ಣುಗಳಲ್ಲಿ  ಸೆರೆಹಿಡಿಯುವುದೇ ಒಂದು ರೋಚಕ ಅನುಭವ. ಸುಂದರಬನದಲ್ಲಿ ಸರೀಸೃಪಗಳು ಹೇರಳ ಸಂಖ್ಯೆಯಲ್ಲಿವೆ. ಹೀಗಾಗಿ ಸುಂದರಬನದಲ್ಲಿ ಓಡಾಡುವಾಗ ಎಚ್ಚರಿಕೆ ಅಗತ್ಯ. ನದಿಯ ದಂಡೆಗಳ ಮೇಲೆ ಮೊಸಳೆಗಳು ಬೇಟೆಗಾಗಿ ಹೊಂಚುಹಾಕುತ್ತಿರುತ್ತವೆ.

ಇಳಿಜಾರಿನಲ್ಲಿದ್ದರೂ ಉರುಳಲ್ಲ ಈ ಬೃಹತ್ ಬಂಡೆ

ಬೃಹದಾಕಾರದ ಬಂಡೆಯ ಮುಂದೆ ನಿಂತುಕೊಳ್ಳುವುದಕ್ಕೆ ಎಂಥವರಿಗೂ ಭಯವಾಗುತ್ತದೆ. ಅದೇನಾದರೂ ಉರುಳಿದರೆ ಎಂಬ ಭಯ. ಆದರೆ, ಇಲ್ಲೊಂದು ಕಲ್ಲು ಬಂಡೆ ಇಳಿಜಾರಿನಲ್ಲಿ ಅಲುಗಾಡದೇ ನಿಂತುಕೊಂಡಿದೆ! ಅದೂ ಅಂತಿಂಥ ಬಂಡೆಯಲ್ಲ. 20 ಅಡಿ ಎತ್ತರ ಮತ್ತು 5 ಮೀಟರ್ ಅಗಲವಾಗಿರುವ ಬೃಹತ್ ಬಂಡೆ. ಈ ಬಂಡೆ ಇಳಿಜಾರಿನಲ್ಲಿಯೂ ನಿಂತಿರುವುದು ಹೇಗೆ ಎನ್ನುವುದು ಇಂದಿಗೂ ನಿಗೂಢ. 
 

ಶ್ರೀಕೃಷ್ಣನ ಬೆಣ್ಣೆಯ ಉಂಡೆ:
ಈ ಬಂಡೆ ಇರುವುದು ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಹಾಬಲಿಪುರಂನಲ್ಲಿ. ಇಲ್ಲಿ 250 ಟನ್ ತೂಕದ ಬೃಹತ್ ಬಂಡೆಯೊಂದು ಕದಲದೇ ಇಳಿಜಾರಿನಲ್ಲಿ ನಿಂತುಕೊಂಡಿದೆ. ಅದೂ 1200 ವರ್ಷಗಳಿಂದಲೂ ಅಲ್ಲಿಯೇ ಇದೆ ಎಂದು ಹೇಳಲಾಗಿದೆ. ಇಷ್ಟೊಂದು ಸುದೀರ್ಘ ವರ್ಷಗಳಿಂದ ಬಂಡೆ ಎಂತಹ ಮಳೆ, ಗಾಳಿಗೂ ಜಗ್ಗದೇ ಇರುವುದಕ್ಕೆ ವೈಜ್ಞಾನಿಕವಾಗಿಯೂ ಕಾರಣ ಸಿಕ್ಕಿಲ್ಲ. ಈ ಬಂಡೆಗೆ ತಮಿಳಿನ ಮೂಲ ಹೆಸರು "ವಾಣಿರೈ ಕಲ್". ಅಂದರೆ ಆಕಾಶ ದೇವತೆಯ ಬಂಡೆ ಎಂದು ಅರ್ಥವಿದೆ.

ಇದೊಂದು ನೈಸರ್ಗಿಕ ರಚನೆಯೇ?
ಈ ಬೃಹತ್ ಬಂಡೆ ನೋಡಲು ಗೋಲಾಕಾರದಲ್ಲಿದ್ದು, ತಳದಲ್ಲಿರುವ ಸ್ಪಲ್ಪವೇ ಸ್ವಲ್ಪ ಜಾಗದಲ್ಲಿ ಸಮತೋಲನ ಕಾಯ್ದುಕೊಂಡಿದೆ. ಈ ಬಂಡೆ ಕೃಷ್ಣನ ಬೆಣ್ಣೆಯ ಉಂಡೆ ಎಂದೇ ಪ್ರಖ್ಯಾತಿಗಳಿಸಿದೆ. ಹಿಂದು ಪುರಾಣದಲ್ಲಿ ಇದಕ್ಕೊಂದು ಕಥೆಯೇ ಇದೆ. ಕೆಲವರು ಹೇಳುವ ಪ್ರಕಾರ ಇದೊಂದು ನೈಸರ್ಗಿಕ ರಚನೆ. ಆದರೆ, ಎಷ್ಟೇ ರಭಸದ ಮಳೆ, ಗಾಳಿ, ಪ್ರವಾಹ ಬಂದರೂ ಭೂ ರಚನೆ ಬಂಡೆಯ ರೂಪದಲ್ಲಿರುವುದಕ್ಕೆ  ಸಾಧ್ಯವೇ ಇಲ್ಲ. ಹಾಗೆ ಆಗಿದ್ದೇ ಆದರೆ, ಅಕ್ಕ ಪಕ್ಕದಲ್ಲಿಯೂ ಇದೇ ರೀತಿಯ ಬಂಡೆಗಳು ಇರಬೇಕಾಗಿತ್ತು. ಆದರೆ,  ಸುತ್ತಲೆಲ್ಲಾ ಬೋಳಾದ ಗುಡ್ಡಗಳಿವೆ. ಇದು ನೈಸರ್ಗಿಕ ರಚನೆಯಲ್ಲ ಬಂಡೆಯನ್ನು ಯಾರೋ ಅಲ್ಲಿ ತಂದು ನಿಲ್ಲಿಸಿದ್ದಾರೆ ಎಂದು ಭಾವಿಸುವುದಾದರೆ, 250 ಟನ್ ಭಾರದ ಬಂಡೆಯನ್ನು ಅಲುಗಾಡಿಸುವುದು ಅಷ್ಟು ಸುಲಭವಲ್ಲ. ಶಕ್ತಿಶಾಲಿ ಆಧುನಿಕ ಕ್ರೇನ್ಗಳಿಂದ ಮಾತ್ರ ಬಂಡೆಗಳನ್ನು ತಳ್ಳಬಹುದು.

ಕೇವಲ 4 ಅಡಿಯ ಮೇಲೆ ನಿಂತಿದೆ
ಇನ್ನು ಈ ಬಂಡೆ ಕೇವಲ 4 ಅಡಿ ಜಾಗದಲ್ಲಿ ನಿಂತುಕೊಂಡಿದೆ. ಅದೇ ಸಮತಟ್ಟಾದ ನೆಲದ ಮೇಲೆ ಬಂಡೆ ನಿಂತಿದ್ದರೆ ಏನೂ ಅನ್ನಿಸುತ್ತಿರಲಿಲ್ಲ. ಆದರೆ, ಬಂಡೆ ಇರುವುದು ಇಳಿಜಾರಿರುವ ಗುಡ್ಡದ ಮೇಲೆ. ಇಂದಿನ ಆಧುನಿಕ ಇಂಜಿನಿಯರಿಂಗ್ ತಂತ್ರಜ್ಞಾನದಿಂದಲೂ ಅಷ್ಟೊಂದು ಗಾತ್ರದ ಬಂಡೆಯನ್ನು 4 ಪಾಯದ ಮೇಲೆ ನಿಲ್ಲಿಸುವುದು ಅಸಾಧ್ಯ.  ಒಮ್ಮೆ  ಊಹಿಸಿಕೊಳ್ಳಿ: ಆ ಜಾಗದಲ್ಲಿ ಚಿಕ್ಕದೊಂದು ಚಂಡು ಇಟ್ಟರೂ ವೇಗವಾಗಿ ಉರುಳಿ ಹೋಗುತ್ತದೆ. ಇನ್ನು 250 ಟನ್ ಭಾರದ ಬಂಡೆಯನ್ನು ಇಟ್ಟರೆ ಉರುಳಿ ಹೋಗದೇ ಇರಲು ಹೇಗೆ ಸಾಧ್ಯ ಎಂದು.

ಏಳು ಆನೆಗಳು ಎಳೆದರೂ ಉರುಳಲಿಲ್ಲ!
1908ರಲ್ಲಿ ಮದ್ರಾಸ್ ಗವರ್ನರ್ ಆರ್ಥರ್ ಲಾವ್ಲಿ, ಈ ಬಂಡೆ ಹೀಗೆಯ ಇದ್ದರೆ  ಜನರಿಗೆ ಅಪಾಯ ಎಂಬುದನ್ನು ಅರಿತು  ಅದನ್ನು ಉರುಳಿಸಲು ಮುಂದಾಗಿದ್ದರು. ಅದಕ್ಕಾಗಿ  ಏಳು ಆನೆಗಳನ್ನು ಬಂಡೆಗೆ ಕಟ್ಟಿ  ಎಳೆಸುವ ಯತ್ನ  ಮಾಡಲಾಯಿತು.  ಆದರೆ, ಬಂಡೆ ಒಂದಿಚೂ ಕದಲಲಿಲ್ಲ. ಕೊನೆಗೆ ಗವರ್ನರ್ ಬಂಡೆಯನ್ನು  ಉರುಳಿಸುವ ಪ್ರಯತ್ನವನ್ನು ಕೈಬಿಡಬೇಕಾಯಿತು. ಪಲ್ಲವ ದೊರೆ ನರಸಿಂಹವರ್ವನ್ ಬಂಡೆಯನ್ನು ಉರುಳಿಸಲು ಯತ್ನಿಸಿದ್ದ. ಹೀಗಾಗಿ ಬಂಡೆ ಪಲ್ಲವರ  ಕಾಲ (7ನೇ ಶತಮಾನ)ಕ್ಕಿಂತಲೂ ಪೂರ್ವದಿಂದಲೂ ಅಲ್ಲಿಯೇ ಇದೆ. ಆದರೆ, ಆ ಬಂಡೆ ಅಲ್ಲಿ ಬಂದಿದ್ದು ಹೇಗೆ?  ಅದನ್ನು ಯಾರಾದರೂ ತಂದಿಟ್ಟಿದ್ದಾರೆಯೇ? ಎಂಬುದಕ್ಕೆ ಉತ್ತರ ಸಿಕ್ಕಿಲ್ಲ. ಅದೇನೇ ಇರಲಿ ಮಹಾಬಲಿಪುರಂಗೆ ಭೇಟಿ ನೀಡುವ ಪ್ರವಾಸಿಗರು ಈ ಬಂಡೆಯನ್ನು ನೋಡಲು ಮರೆಯುವುದಿಲ್ಲ. ಅದರ ಕೆಳಗಡೆ ನಿಂತು ಫೋಟೋ ತೆಗೆಸಿಕೊಂಡು ಆನಂದ ಅನುಭವಿಸುತ್ತಾರೆ.  

ಕಣ್ಮನ ಸೆಳೆಯುವ ಚಾಕೊಲೇಟ್ ಗುಡ್ಡಗಳು

ಮಕ್ಕಳಿಗೆ ಚಾಕೊಲೇಟ್ ಅಂದರಂತೂ ಪಂಚಪ್ರಾಣ. ಇನ್ನು ಚಾಕೊಲೇಟ್ನಿಂದ ಮಾಡಿದ ಗುಡ್ಡವೇ ಇದ್ದರೆ ಏನಾದೀತು! ಆಶ್ಚರ್ಯವಾಗಬೇಡಿ ಈ ಗುಡ್ಡವನ್ನು ಚಾಕೊಲೇಟ್ನಿಂದ ಮಾಡಿಲ್ಲ. ಗುಡ್ಡಗಳು ಚಾಕೊಲೇಟ್ ರೀತಿಯಲ್ಲೇ ಗುಂಡಗೆ, ಗೋಳಾಕಾರವಾಗಿ ನಿರ್ಮಾಣಗೊಂಡಿದ್ದರಿಂದ ಇವುಗಳಿಗೆ ಚಾಕೊಲೇಟ್ ಗುಡ್ಡಗಳು ಎಂದು ಹೆಸರು ಬಂದಿದೆ. ಈ ಗುಡ್ಡಗಳು ಇರುವುದು ಫಿಲಿಪ್ಪೀನ್ಸ್ನ ಬೊಹೊಲ್ ದ್ವೀಪದಲ್ಲಿ. ಅಲ್ಲಿ ನೂರಾರು ಚಾಕೊಲೇಟ್ ಗುಡ್ಡಗಳು ಕಾಣಸಿಗುತ್ತವೆ. ಈ ಗುಡ್ಡಗಳು ನೈಸಗರ್ಗಿಕವಾಗಿ ರೂಪಗೊಂಡಿವೆ. ಮಾನವನಿರ್ಮಿತ ಅಲ್ಲ ಎಂದು ನಂಬುವುದೇ ಕಷ್ಟ. 



ಹೆಸರು ಬಂದಿದ್ದು ಹೇಗೆ?
ಈ ಗುಡ್ಡಗಳು ವಿಶೇಷ ಮತ್ತು ಬೊಹೊಲ್ ದ್ವೀಪದಲ್ಲಿ ಅಸಾಮಾನ್ಯವಾದ ಭೂರಚನೆಯನ್ನು ಹೊಂದಿವೆ. ಸುಮಾರು 50 ಚದರ ಕಿ.ಮೀ. ವ್ಯಾಪ್ತಿಯಲ್ಲಿ  1268ರಿಂದ 1776 ಗೋಲಾಕಾರದ ಚಾಕೊಲೇಟ್ ಗುಡ್ಡಗಳನ್ನು ನೋಡಬಹುದಾಗಿದೆ. ಈ ಗುಡ್ಡಗಳು ವರ್ಷದ ಬಹುತೇಕ ಸಮಯ ಹಸುರಿನಿಂದ ಕೂಡಿರುತ್ತವೆ. ಆದರೆ, ಬೇಸಿಗೆಯ ವೇಳೆ ಗುಡ್ಡದ ಮೇಲಿನ ಹುಲ್ಲುಗಳು ಒಣಗಿ ಚಾಕೊಲೇಟ್ ಬಣ್ಣಕ್ಕೆ ತಿರುಗುತ್ತವೆ. ದೂರದಿಂದ ನೋಡಿದರೆ ಯಾರೋ ಚಾಕೊಲೇಟ್ಗಳನ್ನು ಗುಡ್ಡೆಹಾಕಿಟ್ಟಂತೆ ಕಾಣಿಸುತ್ತದೆ. ಹೀಗಾಗಿ ಇವುಗಳನ್ನು ಚಾಕೊಲೇಟ್ ಗುಡ್ಡಗಳು ಎಂದು ಕರೆಯಲಾಯಿತು.

ಗುಡ್ಡಗಳು ನಿಮರ್ಮಾಣವಾಗಿದ್ದು ಹೇಗೆ?

ಈ ಗುಡ್ಡಗಳು ಅಷ್ಟೇನೂ ಎತ್ತರವಾಗಿಲ್ಲ. ಅವುಗಳ ಎತ್ತರ 150ರಿಂದ 400 ಅಡಿಗಳು. ಗುಡ್ಡಗಳ ಎತ್ತರದಲ್ಲಿ 98ರಿಂದ 160 ಅಡಿಗಳಷ್ಟು ವ್ಯತ್ಯಾಸವಿದೆ. ದೂರದಿಂದ ನೋಡಲು ಒಂದೇ ರೀತಿಯಲ್ಲಿ ಕಾಣುತ್ತವೆ. ಬೊಹೊಲ್ ದ್ವೀಪದಲ್ಲಿರುವ ಸಗಬಯನ್, ಕಮರ್ೆನ್, ಬಟುವಾನ್ ಪಟ್ಟಣಗಳ ಮಧ್ಯೆ ಚಾಕೊಲೇಟ್ ಗುಡ್ಡಗಳು ವ್ಯಾಪಿಸಿಕೊಂಡಿವೆ. ಅತಿ ಎತ್ತರದ ಗುಡ್ಡ 390 ಅಡಿಗಷ್ಟು ಎತ್ತರವಾಗಿದೆ. ಭೂಗೋಳ ಶಾಸ್ತ್ರದ ಪ್ರಕಾರ ಈ ಗಡ್ಡಕ್ಕೆ ಮೊಗೊಟೆ (ಗೋಳಾಕಾರದ ರಚನೆ)ಗಳು ಎಂದು ಹೆಸರಿಸಲಾಗುತ್ತದೆ. ಈ ರೀತಿಯ ಗುಡ್ಡಗಳು ನಿಮರ್ಮಾಣವಾಗುವುದಕ್ಕೆ ಕಾರಣವೇನೆಂಬುದರ ಬಗ್ಗೆ ಭೂ ವಿಜ್ಞಾನಿಗಳು ಸತತವಾಗಿ ಅಧ್ಯಯನವನ್ನು ನಡೆಸುತ್ತಿದ್ದಾರೆ. ಹೆಚ್ಚಿನ ವಿಶ್ಲೇಷಕರು ಹೇಳುವುದೇನೆಂದರೆ: ಹವಳದ ದಂಡೆಗಳು ಸಮುದ್ರ ಮಟ್ಟದಿಂದ ಎತ್ತರದಲ್ಲಿ ಸಂಗ್ರಹವಾದಾಗ ಭೂಮಿಯ ಮೇಲ್ಪದರದ ಸ್ಥಳಾಂತರದಿಂದಾಗಿ ಗುಡ್ಡಗಳು ರೂಪಗೊಂಡವು. ಸಾವಿರಾರು ವರ್ಷಳಿಂದ ಗಾಳಿಯ ರಭಸ ಮತ್ತು ಸವೆತಕ್ಕೆ ಸಿಕ್ಕಿ ಗುಡ್ಡಗಳು ಗೋಳಾಕಾರದ ರಚನೆಯನ್ನು ಪಡೆದುವು. ಪ್ರತಿಯೊಂದು ಚಾಕೊಲೇಟ್ ಗುಡ್ಡಗಳನ್ನು ಕಸರ್ಟ್ ಎಂದು ಕರೆಯಲಾಗುತ್ತದೆ. ಇವು ಸುಣ್ಣಕಲ್ಲುಗಳಿಂದ ಮಾಡಲ್ಪಟ್ಟಿವೆ. ಮೇಲ್ಭಾಗದಲ್ಲಿ ಕಂದು ಮಿಶ್ರಿತ ಮಣ್ಣು ಮತ್ತು ಹುಲ್ಲಿನಿಂದ ಆವರಿಸಲ್ಪಟ್ಟಿದೆ. ಸುತ್ತಮುತ್ತಲಿನ ಕೃಷಿ ಭೂಮಿಯ ಸವೆತದಿಂದ ವಿಶಿಷ್ಟವಾದ ರಚನೆಯ ಗುಡ್ಡಗಳು ನಿಮರ್ಾಣಗೊಂಡಿವೆ ಎನ್ನುವ ಇನ್ನೊಂದು ವಾದವೂ ಇದೆ. ಜ್ವಾಲಾಮುಖಿಗಳಿಂದಾಗಿ ಈ ಗುಡ್ಡಗಳು ನಿಮರ್ಾಣಗೊಂಡಿವೆ ಎಂಬ ಸಿದ್ಧಾಂತವೂ ಇದೆ.

ದಂತೆಕತೆಗೂ ಹೆಸರುವಾಸಿ
ಚಾಕೊಲೇಟ್ ಗುಡ್ಡಗಳು ಉಗಮವಾದ ಬಗ್ಗೆ ಸ್ಥಳೀಯವಾಗಿ ಹಲವಾರು ದಂತ ಕತೆಗಳಿವೆ. ಅದರಲ್ಲೊಂದು ಕತೆ ಹೀಗೆ ಹೇಳುತ್ತದೆ. ಆರ್ಗೋ ಹೆಸರಿನ ಅಸುರನೊಬ್ಬ, ಮನುಷ್ಯ ಮಹಿಳೆಯನ್ನು ಪ್ರೀತಿಸುತ್ತಾನೆ. ಆಕೆ ಸಾವಿನ ಬಳಿಕ ಆತ ಸುರಿಸಿದ ಕಣ್ಣೀರು ಎಲ್ಲೆಲ್ಲಿ ಬಿದ್ದಿದೆಯೋ ಅಲ್ಲೆಲ್ಲಾ ಒಂದೊಂದು ಚಾಕೊಲೇಟ್ ಗುಡ್ಡ ಸೃಷ್ಟಿಯಾಯಿತಂತೆ.

ಪ್ರವಾಸಿ ತಾಣ
ಚಾಕೊಲೇಟ್ ಹಿಲ್ಸ್ ಫಿಲಿಪ್ಪೀನ್ನ ಪ್ರಮುಖ ಪ್ರವಾಸಿ ತಾಣವಾಗಿದ್ದು, ಯುನೆಸ್ಕೋದ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಲ್ಪಟ್ಟಿದೆ. ಬೇಸಿಗೆಯಲ್ಲಿ ಭೇಟಿ ನೀಡಿದರೆ ಚಾಕೊಲೇಟ್ ಗುಡ್ಡಗಳ ಆನಂದವನ್ನು ಅನುಭವಿಸಬಹುದು.

ಮೊಸಳೆಗಳೇಕೆ ಮನುಷ್ಯನ ಮೇಲೆ ದಾಳಿ ಮಾಡುತ್ತವೆ?

ಒಮ್ಮೆ ಮೊಸಳೆಯ ಬಾಯಿಗೆ ಸಿಕ್ಕಿದರೆ ಮುಗಿಯಿತು. ತಪ್ಪಿಸಿಕೊಂಡು ಬರುವ ಮಾತೇ ಇಲ್ಲ. ಅದರ ಬಲಿಷ್ಠ ದವಡೆಗಳು ನಿಮ್ಮ ಮೂಳೆಗಳನ್ನು ಕೋಲು ಮುರಿದಂತೆ ತುಂಡು ತುಂಡು ಮಾಡಿ ಬಿಡುತ್ತವೆ. ಆದರೆ, ಜಗತ್ತಿನ ವಿವಿಧೆಡೆ ಸಾವಿರಾರು ಮಂದಿ ಪ್ರತಿನಿತ್ಯವೂ ಮೊಸಳೆಗಳ ಬಾಯಿಗೆ ಸಿಲುಕುವ ಅಪಾಯವನ್ನು ಎದುರುಗೊಳ್ಳುತ್ತಲೇ ಇರುತ್ತಾರೆ. ಶಾರ್ಕ್ಗಳಿಗಿಂತಲೂ ಮೊಸಳೆ ದಾಳಿಗಳಿಂದೇ ಹೆಚ್ಚು ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ!  
 

ಆದರೆ, ಮಸಳೆಗಳು ಮಾನವರ ಮೇಲೆಯೇ ದಾಳಿ ಮಾಡಬೇಕು ಎಂದು ಕಾದು ಕುಳಿತಿರುವುದಿಲ್ಲ. ಬೇಟೆಯಾಡಿ ತಿನ್ನುವ ಪ್ರಾಣಿಗಳಿಗಾಗಿ ನೀರಿನಲ್ಲಿ ಮುಳುಗಿಕೊಂಡು ಕಾದುಕುಳಿತಿರುತ್ತವೆ. ಯಾವುದೇ ಪ್ರಾಣಿ ನೀರು ಕುಡಿಯಲು ನದಿಯ ದಂಡೆಗೆ ಬಂದರೆ, ಅದರ ಕೆಲಸ ಅರ್ಧ ಮುಗಿದಂತೆ. ಬೇಟೆಯನ್ನು ಪಡೆಯಲು ನೆಲದ ಮೇಲೂ ಅವು ಎಗರಿ ಆಕ್ರಮಣ ನಡೆಸಬಲ್ಲವು. ಒಂದುವೇಳೆ ಬೇಟೆ ದುರಾದೃಷ್ಟಕ್ಕೆ ಮನುಷ್ಯನೇ ಆಗಿದ್ದರೆ ಅವು ಕಿಂತಿತ್ತೂ ಕರುಣೆ ತೋರುವುದಿಲ್ಲ. ವರದಿಯೊಂದರೆ  ಪ್ರಕಾರ ಆಫ್ರಿಕಾವೊಂದರಲ್ಲಿಯೇ ಮೊಸಳೆಗಳ ದಾಳಿಗೆ ಪ್ರತಿವರ್ಷ ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಸಣ್ಣ ಸಮುದಾಯ ಇರುವ ದುರ್ಗಮಪ್ರದೇಶಗಳಲ್ಲಿ ಮೊಸಳೆಗಳ ಆಕ್ರಮಣ ನಡೆದರೆ ಅವು ಹೆಚ್ಚಿನ ಜನರಿಗೆ ತಿಳಿಯುವುದೇ ಇಲ್ಲ. ಮೂರರಲ್ಲಿ ಒಂದು ಅಥವಾ ಅರ್ಧದಷ್ಟು ದಾಳಿಗಳು ಸಾವಿನಲ್ಲಿ ಅಂತ್ಯಗೊಳ್ಳುತ್ತವೆ. ಆದರೆ, ಆಗೊಮ್ಮೆ ಈಗೊಮ್ಮೆ ನಡೆಯುವ ಶಾಕರ್್ ದಾಳಿಗಳೇ ಮಾಧ್ಯಮಳಲ್ಲಿ ಹೆಚ್ಚು ಪ್ರಚಾರವನ್ನು ಪಡೆದುಕೊಳ್ಳತ್ತವೆ.

ರಕ್ತ ಬಿಸಿಯಾದಂತೆ ಹೆಚ್ಚು ಆಕ್ರಮಣಕಾರಿ!
ಮೊಸಳೆಗಳು ಕೆಲವೊಂದು ಋತುಗಳಲ್ಲಿ ಹೆಚ್ಚು ಸಕ್ರಿಯವಾಗಿ ದಾಳಿ ನಡೆಸುತ್ತವೆ. ಮಳೆಗಾಲದ ಸಮಯ, ಉಷ್ಣಾಂಶ ಏರಿಕೆಯಾದಾಗ, ಮರಿ ಮಾಡುವ ಸಮಯದಲ್ಲಿ ಮೊಸಳೆ ದಾಳಿಗಳು ಸಾಮಾನ್ಯ. ಅಕ್ಟೋಬರ್ ಮತ್ತು ಮಾಚರ್್ನಲ್ಲಿ ದಾಳಿ ಹೆಚ್ಚು. ಮೊಸಳೆಗಳು ತಂಪು ರಕ್ತದ ಪ್ರಾಣಿಗಳಾಗಿದ್ದು, ಬಿಸಿಲು ನೆತ್ತಿಗೆ ಏರುತ್ತಿದ್ದಂತೆ ಆಕ್ರಮಣ ಶೀಲವಾಗಿರುತ್ತವೆ. ಸೂರ್ಯ ಮುಳುಗುತ್ತಿದ್ದಂತೆ ಅವು ಅಷ್ಟೊಂದು ಸಕ್ರಿಯವಾಗಿರುವುದಿಲ್ಲ. ಆದರೆ, ಮೊಸಳೆಗಳಿಗೆ ರಾತ್ರಿಯ ವೇಳೆಯಲ್ಲಿಯೂ ನೋಡುವ ಸಾಮಥ್ರ್ಯವಿದೆ.

ಮಕ್ಕಳ ಮೇಲೆ ಆಕ್ರಮಣ ಜಾಸ್ತಿ
ನದಿಯಲ್ಲಿ ಈಜಾಡಲು ತೆರಳಿದ್ದಾಗ ವಯಸ್ಕರಿಗಿಂತ ಚಿಕ್ಕ ಮಕ್ಕಳು ಅಥವಾ ಬಾಲಕರನ್ನು ಗುರಿಯಾಗಿಸಿಕೊಂಡು ಮೊಸಳೆಗಳು ಆಕ್ರಮಣ ನಡೆಸುತ್ತವೆ. ಬೇಟೆ ಚಿಕ್ಕದಾದಷ್ಟು ಹಿಡಿದುತಿನ್ನಲು ಅದಕ್ಕೆ ಸುಲಭವಾಗುತ್ತದೆ. ಮೀನು ಹಿಡಿಯುತ್ತಿರುವ ವೇಳೆ ಪುರುಷರು ಮೊಸಳೆಗಳ ದಾಳಿಗೆ ತುತ್ತಾಗುತ್ತಾರೆ. ನದಿಗಳನ್ನು ದಾಟುವಾಗ, ನೀರನ್ನು ತುಂಬಿಕೊಳ್ಳಲೆಂದು ನದಿಗೆ ಇಳಿದಾಗ ಮಹಿಳೆಯರ ಮೇಲೆ ಮೊಸಳೆಗಳು ಆಕ್ರಮಣ ನಡೆಸುತ್ತವೆ.

ಪಾರಾಗುವುದು ಹೇಗೆ?
ಮೊಸಳೆಗಳ ಗಮನಕ್ಕೆ ಬರದಂತೆ ಎಚ್ಚರವಾಗಿದ್ದರೆ,  ದಾಳಿಯಿಂದ ಪಾರಾಗಬಹುದು. ಆದರೆ, ಸದ್ದು-ಗದ್ದಲ ಮಾಡಿ ಮೊಸಳೆಗಳನ್ನು ಹೆದರಿಸಲು ಜನರು ಪದೇ  ಪದೇ ಪ್ರಯತ್ನಿಸುತ್ತಾರೆ. ಈ ರೀತಿ ಮಾಡುವುದರಿಂದ ಮೊಸಳೆಗಳು ಹದರುವುದಕ್ಕಿಂತ ಹೆಚ್ಚಾಗಿ ಅವು ಆಕ್ರಮಣ ನಡೆಸುವ ಸಾಧ್ಯತೆಯೇ ಹೆಚ್ಚಿರುತ್ತದೆ. ಒಂದುವೇಳೆ ಮೊಸಳೆಗಳು ಬಾಯಿಹಾಕಿದರೆ ತಪ್ಪಿಸಿಕೊಳ್ಳುವುದು ಅಸಾಧ್ಯದ ಮಾತೇ ಸರಿ. ಸಮಯ ಪ್ರಜ್ಞೆಯಿಂದ ಮೊಸಳೆಗಳ ಕಿವಿಗಳಲ್ಲಿ ಕೈ ಬೆರಳನ್ನು ಹಾಕಿದರೆ ಅಥವಾ ಮೂಗಿನ ಮೇಲೆ ಗುದ್ದಿದರೆ ಎನಾದರೂ ಪ್ರಯೋಜನವಾಗಬಹುದು. ಒಂದು ವೇಳೆ ಮೊಸಳೆಯ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದಿರಿ ಎಂದಾದರೆ ಅವು ನಿಮ್ಮನ್ನು ಬಿಟ್ಟು ಬಿಡುತ್ತವೆ.

ಜನರಿಂದ ಮೊಸಳೆಗಳ ಹತ್ಯೆ:
ಕಳವಳದ ಸಂಗತಿ ಏನೆಂದರೆ ಇಂದು ಮೊಸಳೆಗಳ ಅನೇಕ ಜಾತಿಗಳು ಅಳಿವಿನ ಅಂಚಿನಲ್ಲಿವೆ. ಕಾಣೆಯಾದ ಮಕ್ಕಳನ್ನು ಮೊಸಳೆಗಳೇ ತಿಂದಿವೆ ಎಂದು ಭಾವಿಸಿ ಜನರು ಮೊಸಳೆಗಳನ್ನು ಕೊಂದು ಅವುಗಳ ಹೊಟ್ಟೆಯನ್ನು ಬಗೆಯುತ್ತಿದ್ದಾರೆ.

ಯೇತಿ ಎಂಬ ಹಿಮಮಾನವ!?

ಮಂಗನಿಂದ ಮಾನವ ರೂಪಗೊಂಡ ಎನ್ನುವುದನ್ನು ಇತಿಹಾಸ ಹೇಳುತ್ತದೆ. ಅದೇರೀತಿ ಹಿಮಾಲಯದಲ್ಲಿ ಮನುಷ್ಯನ ರೀತಿಯಲ್ಲೇ ಇರುವ ಮಂಗಮಾನವ ಅಥವಾ ಹಿಮಮಾನವರು ನೆಲೆಸಿದ್ದಾರೆ ಎಂಬ ಪ್ರತೀತಿ ಇದೆ. ಅಪರೂಪಕ್ಕೊಮ್ಮೆ ಹಿಮ ಮಾನವ ಕಾಣಿಸಿಕೊಂಡ ಸುದ್ದಿ ಹರಿದಾಡುತ್ತಿರುತ್ತದೆ. ಕ್ರಿ.ಶ.ಪೂರ್ವ 3ನೇ ಶತಮಾನದಿಂದ ಇಂದಿನವರೆಗೂ ದೈತ್ಯ ಹಿಮ ಮಾನವನ ಹುಡುಕಾಟ ನಡೆಯುತ್ತಲೇ ಇದೆ.

 ಯೇತಿ ಅಥವಾ ತುಂಬು ಕೂದಲಿನ ಹಿಮಮಾನವ ಆದಿವಾಸಿ ಪ್ರಾಣಿ ನೇಪಾಳ ಮತ್ತು ಟಿಬೆಟಿನ ಹಿಮಾಲಯ ಪರ್ವತ ಪ್ರದೇಶದಲ್ಲಿ ನೆಲೆಸಿತ್ತು ಎಂದು ಹೇಳಲಾಗಿದೆ. ಮಂಗಮಾನವ ಸ್ವರೂಪ ಹೊಂದಿರುವ ಈ ಪ್ರಾಣಿಯು ಇತಿಹಾಸ ಮತ್ತು ಕಾಲ್ಪನಿಕ ಕತೆಗಳ ಭಾಗವಾಗಿದೆ. ಸ್ಥಳೀಯ ಜನರು ಈ ಪ್ರಾಣಿಯನ್ನು ಯೇತಿ ಮತ್ತು ಮೆಹ್- ತೆಕ್ ಎಂಬ ಹೆಸರಿನಿಂದ ಕರೆಯುತ್ತಾರೆ.  ಆದರೆ, ಇದುವರೆಗೂ ಹಿಮ ಮಾನವನ ಅಸ್ತಿತ್ವದ ಬಗ್ಗೆ ನಿಖರವಾದ ಆಧಾರಗಳು ಲಭಿಸಿಲ್ಲ. ಹೀಗಾಗಿ ಇತಿಹಾಸ ಮತ್ತು ಕಾಲ್ಪನಿಕ ದಂತಕಥೆಯಾಗಿಯೇ ಉಳಿದುಕೊಂಡಿದೆ. ಈ ಕುರಿತಾದ ದಂತೆ ಕಥೆಯೊಂದು ಹೀಗೆ ಹೇಳುತ್ತದೆ...
ಯೇತಿ ಅಥವಾ ಹಿಮ ಮಾನವನ ಹುಡುಕಾಟ ಅಲೆಕ್ಸಾಂಡರ್ ಚಕ್ರವರ್ತಿಯ ಕಾಲದಿಂದಲೇ ಆರಂಭವಾಗಿತ್ತಂತೆ. ಸಿಂಧು ಕಣಿವೆಯನ್ನು ಗೆದ್ದುಕೊಳ್ಳುವ ಸಲುವಾಗಿ ಕ್ರಿ.ಶ.ಪೂರ್ವ 326ರಲ್ಲಿ ಅಲೆಕ್ಸಾಂಡರ್ ಭಾರತದ ಮೇಲೆ ದಂಡಯಾತ್ರೆ ಕೈಗೊಂಡಿದ್ದ. ದೈತ್ಯ ಯೇತಿಯ ಬಗ್ಗೆ ಕೇಳಿದ್ದ ಅಲೆಕ್ಸಾಂಡರ್ ತನಗೊಂದು ಯೇತಿಯನ್ನು ನೀಡುವಂತೆ ಸ್ಥಳೀಯರನ್ನು ಕೇಳಿದ್ದನಂತೆ. ಆದರೆ, ಎತ್ತರದ ಹಿಮ ಪರ್ವತದಲ್ಲಿ ವಾಸಿಸುವ ಅವುಗಳನ್ನು ಕೆಳ ಪ್ರದೇಶಕ್ಕೆ ತಂದರೆ ಸುತ್ತು ಹೋಗುತ್ತವೆ. ಹೀಗಾಗಿ ಯೇತಿಯನ್ನು ತಂದುಕೊಡಲು ಸಾಧ್ಯವಿಲ್ಲ ಎಂದು ಜನರು ಹೇಳಿದ್ದರಂತೆ. 
ಯೇತಿಗಳಿಗೆ ಹಿಮ ಮಾನವ ಎಂಬ ಹೆಸರು ಬಂದಿದ್ದು 1921ರಲ್ಲಿ. ಪತ್ರಕರ್ತ ಹೆನ್ರಿ ನ್ಯೂಮ್ಯಾನ್ ಮೆಹೋಹ್ ಎಂಬ ಶಬ್ದವನ್ನು ಡರ್ಟಿ ಎಂದು ತಪ್ಪಾಗಿ ಅರ್ಥಮಾಡಿಕೊಂಡ. ಕೊನೆಗೆ ಅವುಗಳನ್ನು ಎಬೊಮಿನೆಬಲ್ ಸ್ನೋಮೆನ್ (ಹಿಮದಲ್ಲಿನ ಕೊಳಕು ಪುರುಷರು) ಎಂದು ಕರೆದ. ಯೇತಿ ಎಂಬ ಪದವನ್ನು ಕಲ್ಲು, ಶಿಲೆ  ಅಥವಾ ಬಂಡೆಯ ಜಾಗ ಮತ್ತು ಕಪ್ಪು ಬಣ್ಣದ ಕರಡಿ ಎಂಬ ಪದಗಳ  ಸಂಯೋಗದಿಂದ ಪಡೆಯಲಾಗಿದೆ.

ಯೇತಿಗಾಗಿ ಹುಡುಕಾಟ:
ಹಿಮಾಲಯದ ವನ್ಯ ಮೃಗಗಳ ತಪ್ಪು ಗ್ರಹಿಸುವಿಕೆಯಿಂದ ಯೇತಿಯ ಬಗೆಗಿನ ವಿವರಣೆಗೆ ಅವಕಾಶ ಮಾಡಿಕೊಟ್ಟಿತು. 21ನೇ ಶತಮಾದ ಆರಂಭದಲ್ಲಿ ಪಶ್ಚಿಮಾತ್ಯರು ಹಿಮಾಲಯ ಪರ್ವತಗಳಲ್ಲಿ ಅಲೆಯಲು ಶುರುಮಾಡಿದರು. ಅಪರಿಚಿತ ಮಾರ್ಗದಲ್ಲಿ ಒಮ್ಮೊಮ್ಮೆ ವಿಚಿತ್ರವಾದ  ಪ್ರಾಣಿಗಳನ್ನು ನೋಡಿದಾಗ ಯೇತಿಗಳ ಇರುವಿಕೆಯ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದವು. ಕೆಲವರು ಸೂಚಿಸಿದಂತೆ ಯೇತಿ ಒಂದು ಮಾನವ ಲಕ್ಷಣದ ಒಬ್ಬೊಂಟಿಗ. 1986ರಲ್ಲಿ ದಕ್ಷಿಣ ಟೈರೋಲಿಯನ್ ಪರ್ವತಾರೋಹಿ ರೈನ್ಹೋಲ್ಡ್ ಮೆಸ್ನರ್ ಎಂಬಾತ ತಾನು ಯೇತಿಯನ್ನು ಕಣ್ಣಾರೆ ಕಂಡಿದ್ದಾಗಿ ಹೇಳಿಕೊಂಡಿದ್ದಾನೆ. "ಮೈ ಕ್ವೆಸ್ಟ್ ಫಾರ್ದ ಯೇತಿ" ಎಂಬ ಪುಸ್ತಕದಲ್ಲಿ ಯೇತಿಯ ಬಗ್ಗೆ ವಿವರಣೆ ನೀಡಿದ್ದಾನೆ. ಆತನ ಪ್ರಕಾರ ಯೇತಿ ಅಂದರೆ ಅಳಿವನ ಅಂಚಿನಲ್ಲಿರು ಹಿಮಾಲಯದ ಒಂದು ಕೆಂಪುಬಣ್ಣದ ಕರಡಿ. ಇದು ನೇರವಾಗಿ ಅಥವಾ ನಾಲ್ಕು ಕಾಲುಗಳ ಮೇಲೆ ನಡೆಯುತ್ತದೆ. ಮೌಂಟ್ ಎವರೆಸ್ಟ್ ಶಿಖರಾರೋಹಿಗಳು 20000 ಅಡಿ ಎತ್ತದಲ್ಲಿ ಯೇತಿಗಳು ಓಡಾಡಿದ್ದು ಎನ್ನಲಾದ ಹೆಜ್ಜೆಗುರುತನ್ನು ಪತ್ತೆಹಚ್ಚಿದ್ದರು. ಆದರೆ, ಅದನ್ನು ಅನುಸರಿಸಿ ಹೋದಾಗ ಅವರಿಗೆ ಯೇತಿ ಪತ್ತೆಯಾಗಿರಲಿಲ್ಲ.

ಹಾಲಿವುಡ್ ಚಿತ್ರ:

ಯೇತಿಯ ಬಗ್ಗೆ ಹಾಲಿವುಡ್ ಚಿತ್ರಗಳಲ್ಲಿಯೂ ಉಲ್ಲೇಖಿಸಲಾಗಿದೆ. ದ ಸ್ನೋಕ್ರೀಚರ್, ದ ಎಬೊಮಿನೆಬಲ್ ಸ್ನೋಮ್ಯಾನ್, ಮ್ಯಾನ್ಸ್ಟರ್ ಮುಂತಾದ ಚಿತ್ರದಲ್ಲಿ ಯೇತಿ ಬಗ್ಗೆ ತೋರಿಸಲಾಗಿದೆ.
 

ಭೂಮಿ ಎಷ್ಟು ಆಳವಿದೆ ಗೊತ್ತೇ?

ಪ್ರಪಂಚದ ಎಲ್ಲ ಕಡೆಗಳಲ್ಲೂ ಮಾನವ ನೆಲೆಸಿದ್ದಾನೆ. ಭೂಮಿಯನ್ನು ತನ್ನ ಕೈವಶ ಮಾಡಿಕೊಂಡಿದ್ದಾನೆ. ಸಮುದ್ರದ ಆಳಕ್ಕೆ ಇಳಿದು ಬಂದಿದ್ದಾನೆ. ಆಕಾಶದಲ್ಲಿ ಹಾರಿ ಚಂದ್ರನನ್ನೂ ಮುಟ್ಟಿ ಬಂದಿದ್ದಾನೆ. ಆದರೆ, ಭೂಮಿಯ ಗರ್ಭಕ್ಕೆ ಇಳಿಯಲು ಸಾಧ್ಯವೇ ಆಗಿಲ್ಲ. ಆಳಕ್ಕೆ ಹೋಗುವುದಿರಲಿ ಅದರ ಸನಿಹಕ್ಕೂ ತಲುಪಿಲ್ಲ. ಏಕೆಂದರೆ...
 

ಭೂಮಿಯ ಅಗಾಧ ಆಳ!
ಭೂಮಿಯ ಕೇಂದ್ರ ಬಿಂದು 6000 ಕಿ.ಮೀ.ಯಷ್ಟು ಆಳವಾಗಿದೆ. ಭೂಗರ್ಭದ ಹೊರಗಿನ ಭಾಗ ನಮ್ಮ ಕಾಲ ಅಡಿಯಿಂದ ಸುಮಾರು 3000 ಅಡಿ ಆಳದಲ್ಲಿದೆ. ಆದರೆ, ಭೂಮಿಯ ಮೇಲೆ ಮಾನವ ನಿಮರ್ಿಸಿದ ಅತಿ ಆಳದ ಬಾವಿ ಕೇವಲ 12 ಕಿ.ಮೀ. ಮಾತ್ರ. ವೈಜ್ಞಾನಿಕ ಸಂಶೋಧನೆಯೊಂದರ ಸಂಬಂಧ 1994ರಲ್ಲಿ ರಷ್ಯಾದ  ಕೊಲಾ ಸೂಪರ್ಡೀಪ್ ಬೋರ್ಹೋಲ್ ಅನ್ನು ನಿಮರ್ಿಸಲಾಯಿತು. ಅದಕ್ಕಿಂತಲೂ ಹೆಚ್ಚಿನ ಆಳವನ್ನು ಕೊರೆಯಲು ಮಾನವನಿಂದ ಸಾಧ್ಯವಾಗಿಲ್ಲ.
ಜ್ವಾಲಾಮುಖಿ, ಭೂಕಂಪ ಮತ್ತಿತರ ಘಟನೆಗಳು ಕೂಡ ಭೂಮಿಯ ಮೇಲ್ಮೈನ ಸಮೀಪವೇ ಜರುಗುತ್ತವೆ. ಜ್ವಾಲಾಮುಖಿ ಕರಗಿ  ಬೆಂಕಿಯ ಉಂಡೆಯಾಗಿ ಹೊರಬರುವುದು ಕೆಲವೇ ನೂರಾರು ಕಿ.ಮೀ. ಆಳದಿಂದ. ಅತಿಯಾದ ಒತ್ತಡದ ಅಗತ್ಯವಿರುವ ವಜ್ರಗಳು ರೂಪುಗೊಳ್ಳುವುದು 500 ಕಿ.ಮೀ. ಆಳದಲ್ಲಿರುವ ಕಲ್ಲಿನ ಪದರದಲ್ಲಿ. ಅದಕ್ಕಿಂತಲೂ ಆಳದಲ್ಲಿ ಏನಿದೆ  ಎನ್ನುವುದು ಇವತ್ತಿಗೂ ನಿಗೂಢ. ಭೂಮಿಯ ಗರ್ಭದ ಬಗ್ಗೆ ಒಂದೇ ಒಂದು ಕುರುಹು ಲಭ್ಯವಿಲ್ಲದೇ ಹೋದರೂ, ವಿಜ್ಞಾನಿಗಳು ಕೋಟ್ಯಂತರ ವರ್ಷಗಳ ಹಿಂದೆ ಆದ ಭೂರಚನೆಯ ಬಗ್ಗೆ ಒಂದು ಪರಿಕಲ್ಪನೆಯನ್ನು ನೀಡಿದ್ದಾರೆ.

ಭೂಮಿಯ ಆಳದಲ್ಲಿ ಸೂರ್ಯನಷ್ಟೇ ಶಾಖ!
ಭೂಮಿ ಸುಮಾರು 4.5 ಶತಕೋಟಿ ವರ್ಷಗಳ ಹಿಂದೆ ಭೂಮಿ ನಿಮರ್ಾಣಗೊಂಡಿತು ಎಂಬ ವಾದವಿದೆ. ಭೂಮಿಯ ದ್ರವ್ಯರಾಶಿಯ ಹೆಚ್ಚಿನ ಭಾಗ ಭೂಕೇಂದ್ರ ಸುತ್ತವೆ ನೆಲೆಸಿದೆ. ಹೀಗೆ ಭೂಮಿ ರಚನೆಗೊಳ್ಳುವ ಸಂದರ್ಭದಲ್ಲಿ ಯತೇಚ್ಛ ಪ್ರಮಾಣದ  ಕಬ್ಬಿಣ ಭೂಮಿಯ ಮಧ್ಯಭಾಗವನ್ನು ಸೇರಿಕೊಂಡಿತು. ಹೀಗಾಗಿ ಭೂಮಿಯ ಗರ್ಭದಲ್ಲಿ ಶೇ.80ರಷ್ಟು ಕಬ್ಬಿಣವೇ ತುಂಬಿಕೊಂಡಿದೆ. ಆದರೆ, ನಿಖರವಾದ ಪ್ರಮಾಣದ ಬಗ್ಗೆ ಈಗಲೂ ಚರ್ಚೆಗಳು ನಡೆಯುತ್ತಿವೆ.  ನಮ್ಮ ಸುತ್ತಲಿನ ಬ್ರಹ್ಮಾಂಡದಲ್ಲಿ ಭಾರೀ ಪ್ರಮಾಣದ ಕಬ್ಬಿಣದ ಅದಿರು ಶೇಖರಣೆಗೊಂಡಿರುವುದು ಇದಕ್ಕೊಂದು ಉದಾಹರಣೆ.  5000 ಅಡಿ ಆಳದಿಂದ ಆರಂಭವಾಗುವ ಭೂಗರ್ಭ ಗಟ್ಟಿಯಾದ ಕಬ್ಬಿಣದಿಂದ ಕೂಡಿದೆ. ಭೂಮಿಯ ತಿರುಳು 1,220 ಕಿ.ಮೀ.ವ್ಯಾಸವಿದೆ. ಅದರ ಹೊರ ಮೈನಲ್ಲಿ ಕಬ್ಬಿಣ ದ್ರವರೂಪದಲ್ಲಿದೆ. ಹೊರಮೈನಲ್ಲಿರುವ 6,230 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಬ್ಬಿಣವನ್ನು ಕರಗುವಂತೆ ಮಾಡಿದೆ. ಅಂದರೆ, ಸೂರ್ಯನ ಹೊರ ಮೇಲ್ಮೈನಲ್ಲಿರುವಷ್ಟೇ ಉಷ್ಣಾಂಶ ಭೂಮಿಯ ಕೇಂದ್ರದಲ್ಲಿಯೂ ಇದೆ. ಶತಕೋಟಿ ವರ್ಷಗಳಿಗೊಮ್ಮೆ ಭೂಗರ್ಭದ ಉಷ್ಣಾಂಶ 100 ಡಿಗ್ರಿಯಷ್ಟು ಮಾತ್ರ ಇಳಿಕೆಯಾಗುತ್ತದೆ. ಹೀಗಾಗಿ ಭೂಗರ್ಭ ಸದಾ ಬೆಂಕಿಉಂಡೆಯಾಗಿಯೇ ಇರುತ್ತದೆ. ದ್ರವರೂಪದ ಕಬ್ಬಣ ಮುಗಿದ ಬಳಿಕ ಭೂಮಿಯ ಮೇಲೈನ ವರೆಗೂ ವಿವಿಧ ಶಿಲಾಪದರಗಳು ಆವರಿಸಿಕೊಂಡಿವೆ.


ಬಯಲಾಗದ ರಹಸ್ಯ
ಭೂಮಿಯ ಒಡಲಿನಲ್ಲಿರುವ ರಹಸ್ಯಗಳು ಇನ್ನೂ ಸಾಕಷ್ಟು ತಿಳಿದುಬರಬೇಕಿದೆ. ಭೂಮಿಯ ಒಡಲಿನಲ್ಲಿ ಎಷ್ಟು ಶಾಖವನ್ನು ಹಿಡಿದಿಟ್ಟುಕೊಂಡಿದೆ ಎನ್ನುವುದನ್ನು ಕಣ್ಣಾರೆ ನೋಡಲು ಎಂದಿಗೂ ಸಾಧ್ಯವಿಲ್ಲ. ಭೂಗ್ರಹದ ರಚನೆಯಾದಾಗಿನಿಂದಲೂ ಭೂಗರ್ಭ ಕುದಿಯುತ್ತಿರುವ ಬೆಂಕಿಯ ಉಂಡೆಯಂತೆಯೇ ಇದೆ. ಆದರೆ, ಭೂಮಿಯ ಮೇಲೆ ನೆಲೆ ಸಿರುವ ಜೀವ ಸಂಕುಲಕ್ಕೆ ಭೂಮಿಯ ಆಳದಲ್ಲಿನ ಕಾವು ಕಿಂಚಿತ್ತೂ ತಟ್ಟುವುದಿಲ್ಲ ಎನ್ನುವುದೇ ಸೋಜಿಗ!

ಜಗತ್ತಿನ ವಿಷಕಾರಿ ಸಸ್ಯಗಳು

ಹಾವು, ಚೇಳು ಮತ್ತಿತರ ವಿಷಕಾರಿ ಪ್ರಾಣಿಗಳಿಂದಷ್ಟೇ ಅಲ್ಲ, ಕೆಲವೊಂದು ಸಸ್ಯಗಳು ಘನಘೋರ ವಿಷವನ್ನು ಕಕ್ಕಬಲ್ಲವು. ಅಂತಹ ಅಪಾಯಕಾರಿ ಸಸ್ಯಗಳೂ ಸಾಕಷ್ಟಿವೆ. ಅವುಗಳಲ್ಲಿ ಅತ್ಯಂತ ವಿಷಕಾರಿ ಎನಿಸಿಕೊಂಡ ಸಸ್ಯಗಳ ಉದಾಹರಣೆಗಳು ಇಲ್ಲಿವೆ.

ಸರ್ಪದ ವಿಷದಷ್ಟೇ ಅಪಾಯಕಾರಿ

ಅಕೊನಿಟಂ ಸುಂದರವಾದ ನೀಲಿ ಬಣ್ಣದ ಹೂವಿನಿಂದ  ಆಕರ್ಷಿಸುತ್ತದೆ. ಆದರೆ, ಜಗತ್ತಿನ ಮಾರಣಾಂತಿಕ ಸಸ್ಯ ಎನಿಸಿಕೊಂಡಿದೆ. ಈ ಗಿಡ ಮೈಗೆ ಸೋಕಿದರೂ ಸಾವು ಸಂಭವಿಸಬಹುದು. ಎಲೆಗಳಲ್ಲಿರುವ ನ್ಯೂರೊಟಾಕ್ಸಿನ್  (ನರಘಾತಕ ವಿಷ) ಚರ್ಮದ ಮೂಲಕ ದೇಹವನ್ನು ಸೇರುತ್ತದೆ. ಈ ಸಸ್ಯದ ಬೇರುಗಳು ಅತ್ಯಂತ ವಿಷಕಾರಿ. ಸಸ್ಯವನ್ನು ತಿಂದರೆ, ವಾಂತಿ ಮತ್ತು ಅತಿಸಾರ ಕಾಣಿಸಿಕೊಳ್ಳುತ್ತದೆ. ಕೇವಲ 6 ತಾಸಿನಲ್ಲಿಯೇ ಸಾವು ಸಂಭವಿಸಬಹುದು. ಈ ಗಿಡದ ವಿಷ ದೇಹದ ಒಳಗೆ ಸೇರಿದರೆ ಒಂದು ತಾಸಿನ ಒಳಗಾಗಿ ಚಿಕಿತ್ಸೆಗೆ ಒಳಗಾಗಬೇಕು. ಇಲ್ಲವಾದರೆ, ರಕ್ತಪರಿಚಲನೆ ನಿಧಾನಗೊಂಡು  ಹೃದಯಾಘಾತ ಸಂಭವಿಸುತ್ತದೆ. ಅಕೊನಿಟಂನಲ್ಲಿ ಸುಮಾರು 250  ಜಾತಿಯ ಗಿಡಗಳಿವೆ. ವೂಲ್ಫ್ಸ್ ಬೇನ್, ಡೆವಿಲ್ಸ್ ಹೆಲ್ಮೆಟ್, ಬ್ಲೂ ರಾಕೆಟ್ ಮುಂತಾದ ಹೆಸರಿನಿಂದ ಕರೆಯಲಾಗುತ್ತದೆ. ಹುಲ್ಲುಗಾವಲುಗಳಲ್ಲಿ, ಬೆಟ್ಟದ ತುಪ್ಪಲು ಪ್ರದೇಶದಲ್ಲಿ ಇವು ಬೆಳೆಯುತ್ತವೆ. ಹಿಂದಿನ ಕಾಲದಲ್ಲಿ ತೋಳಗಳನ್ನು ಕೊಲ್ಲಲು ಈ  ಸಸ್ಯದ ಎಲೆಯನ್ನು ಬಳಸಿಕೊಳ್ಳುತ್ತಿದ್ದರು. ಹೀಗಾಗಿ ವೂಲ್ಫ್ಸ್ ಬೇನ್ ಎಂಬ ಹೆಸರು ಬಂದಿದೆ.

ಮೈಯನ್ನೇ ಸುಡುವ ಗಿಡ

 ಜೈಂಟ್ ಹೊಗ್ವೀಡ್ ಗಿಡವನ್ನು ಅಪ್ಪಿತಪ್ಪಿ ಮುಟ್ಟಿಬಿಟ್ಟರೆ ಮೈ ಮೇಲೆ ಆಸಿಡ್ ಎರಚಿಕೊಂಡತೆ.
 ಈ ಸಸ್ಯದ ಹೀಣು ಮೈಗೆ ತಾಗಿದರೆ ಚರ್ಮವನ್ನು ಸುಡಲು ಆರಂಭಿಸುತ್ತದೆ. ಚರ್ಮ ಕೆಂಪುಬಣ್ಣಕ್ಕೆ ತಿರುಗುತ್ತದೆ. ಈ ಗಿಡವನ್ನು ಸುಡುವುದು ಕೂಡ ಅಪಾಯಕಾರಿ. ಸುಟ್ಟ ಹೊಗೆಯಿಂದ ಉಸಿರಾಟಕ್ಕೆ ತೊಂದರೆಯಾಗಬಹುದು.  ಈ ಗಿಡ ಬಿಡುವ ಬಿಳಿಯ ಹೂವನ್ನು ನೋಡಲೆಂದು ಹತ್ತಿರ ಹೋದರೆ ಕಣ್ಣೇ ಕುರುಡಾಗಬಹುದು. 19ನೇ ಶತಮಾನದಲ್ಲಿ ವಿದೇಶಿ ಸಸ್ಯಗಳನ್ನು ಪರಿಚಯಿಸುವಾಗ ಅವುಗಳ ಜತೆ ಜೈಂಟ್ ಹೊಗ್ವೀಡ್ ಗಿಡಕೂಡ ಸೇರಿಕೊಂಡಿತ್ತು. ಬಳಿಕ ಯುರೋಪಿನ ಇತರ ದೇಶಗಳಲ್ಲೂ ಇದರ ರಾಕ್ಷಸ ಸಂತತಿ ಹರಡಿಕೊಂಡಿದೆ. ಈ ಗಿಡ 7ರಿಂದ 18 ಅಡಿ ಎತ್ತರಕ್ಕೆ ಬೆಳೆಯಬಲ್ಲದು. ಈ ಗಿಡಗಳನ್ನು ಬೆಳೆಯದಂತೆ ಎಚ್ಚರಿಕೆಯ ಸಂದೇಶಗಳನ್ನು ಅಳವಡಿಸಲಾಗಿದೆ. ಅಮೆರಿಕದಲ್ಲಿ ಈ ಗಿಡವನ್ನು ಬೆಳೆಯುವುದನ್ನು ಕಾನೂನು ಬಾಹಿರಗೊಳಿಸಲಾಗಿದೆ.

ಆಪಲ್ ಆಫ್ ಡೆತ್

ಮ್ಯಾಂಚಿನೇಲ್ ಟ್ರೀ ಉತ್ತರ ಅಮೆರಿಕದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅದಕ್ಕೆ ಸೇಬು ಹಣ್ಣಿನಂಥ ಸಣ್ಣದೊಂದು ಹಣ್ಣು ಬಿಡುತ್ತದೆ. ಈ ಹಣ್ಣನ್ನು ತಿಂದರೆ ಸಾವು ಕಟ್ಟಿಟ್ಟ ಬುತ್ತಿ. ಹೀಗಾಗಿ ಈ ಮರದ ಹಣ್ಣನ್ನು ಆಪಲ್ ಆಫ್ ಡೆತ್ ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲ ಮರದ ಹೀಣು ಮೈ ಮೇಲೆ ಗುಳ್ಳೆಗಳನ್ನು ಏಳಿಸುತ್ತದೆ. ಈ ಸಸ್ಯದ ರಸಗಳು ಕಾರಿಗೆ ಬಳಿದ ಬಣ್ಣವನ್ನು ಅಳಿಸಿಹಾಕುವಷ್ಟು ಶಕ್ತಿಶಾಲಿ  ರಾಸಾಯನಿಕಗಳ ರೀತಿಯಲ್ಲಿ ವತರ್ತಿಸುತ್ತವೆ. 

ಈ ಬೀಜವನ್ನು ತಿನ್ನಬೇಡಿ:

ಕಾಸ್ಟರ್ ಆಯ್ಲ್ ಪ್ಲಾಂಟ್ ಗಿಡದ ಬೀಜಗಲೂ ಔಷಧ ಗುಣವನ್ನು ಹೊಂದಿದ್ದರೂ ವಿಷಕಾರಿ ಎನಿಸಿಕೊಂಡಿವೆ. ಅವುಗಳನ್ನು ನುಂಗಿದರೆ ಏನೂ ಅಪಾಯವಿಲ್ಲ. ಆದರೆ,  ಜಗೆದರೆ ಅಥವಾ 5 ಬೀಜಗಳನ್ನು ನುಂಗಿದರೆ ಸಾವಿಗೆ ಕಾರಣವಾಗಬಲ್ಲದು. ಭಾರತದಲ್ಲಿಯೂ ಈ ಸಸ್ಯ ಬೆಳೆಯುತ್ತದೆ. ಇದರ ಬೀಜ ಶೇ.40ರಷ್ಟು ಎಣ್ಣೆಯ ಅಂಶವನ್ನು ಹೊಂದಿದೆ. ಈ ಎಣ್ಣೆಯನ್ನು ಔಷಧವಾಗಿಯೂ ಬಳಸಲಾಗುತ್ತದೆ.

 

Friday, November 11, 2016

ಮರಗಳೂ ಚಲಿಸಬಲ್ಲವು!

  • ಲ್ಯಾಟಿನ್ ಅಮೆರಿಕದಲ್ಲಿದೆ ಚಲಿಸುವ ಮರ


ಭೂಮಿಯ ಆಳಕ್ಕೆ ಬೇರು ಬಿಟ್ಟು, ದೊಡ್ಡದಾಗಿ ಬೆಳೆಯುವುದೇ ಸಸ್ಯಗಳ ಬದುಕು. ಅವು ಪ್ರಾಣಿಗಳಂತೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸಲು ಸಾಧ್ಯವಿಲ್ಲ. ಇದೇ ಸಾರ್ವಕಾಲಿಕ ಸತ್ಯ ಎಂದು ಬಹುತೇಕರ ನಂಬಿಕೆ. ಆದರೆ, ಮರಗಳು ಕೂಡ ಚಲಿಸಬಲ್ಲವು! ಸರಿಯಾದ ಸೂರ್ಯನ ಬೆಳಕು, ನೆಲ ಸಿಗುವ ಜಾಗಕ್ಕೆ ಹೋಗಬಲ್ಲವು!
 ಹೌದು, ಇಂಥದ್ದೊಂದು ಜಾತಿಯ ಮರಗಳು ಲ್ಯಾಟಿನ್ ಅಮೆರಿಕದ ಭಾಗದಲ್ಲಿ ಕಂಡುಬರುತ್ತವೆ. ಸೊಕ್ರಾಟೆಯಾ ಕ್ಸೋರ್ಹಿಝಾ ಅಥವಾ ವಾಕಿಂಗ್ ಪಾಮ್ ಎಂಬ ಹೆಸರಿನ ಈ ಮರ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸಬಲ್ಲ ವಿಶೇಷ ಸಾಮಥ್ರ್ಯವನ್ನು ಹೊಂದಿದೆ. ಜಗತ್ತಿನ ಏಕೈಕ ಚಲನಶೀಲ ಮರ ಎಂದು ಕರೆಸಿಕೊಂಡಿದೆ.
 
 ಚಲಿಸುವುದು ಹೇಗೆ ಮತ್ತು ಯಾಕಾಗಿ?
ಆಹಾರವನ್ನು ಉತ್ಪಾದಿಸುವ ಸಲುವಾಗಿ ಸೂರ್ಯನ ಬೆಳಕು ಇರುವ ಕಡೆಗೆ ಸಸ್ಯಗಳು ವಾಲುವುದು ಅಥವಾ ಟೊಂಗೆಗಳು ಚಾಚಿಕೊಳ್ಳುವುದನ್ನು ನಾವೆಲ್ಲಾ ನೋಡಿರುತ್ತೇವೆ. ಅದೇರೀತಿ ವಾಕಿಂಗ್ ಪಾಮ್ ಮರಗಳು ಕೂಡ ಮಣ್ಣು ಸವಕಳಿಯಾದಾಗ, ಸದೃಢವಾದ ಮಣ್ಣು ಇರುವ ಪಕ್ಕದ ಜಾಗದಲ್ಲಿ ಬೇರನ್ನು ಬಿಡುತ್ತದೆ. ಹೊಸ ಬೇರು ಭೂಮಿಯ ಆಳಕ್ಕೆ ಇಳಿಯುತ್ತಿದ್ದಂತೆ ಮರ ಆ ಕಡೆಗೆ ವಾಲುತ್ತದೆ. ಆಗ ಹಳೆಯ ಬೇರು ಮೇಲಕ್ಕೆ ಬರುತ್ತದೆ. ಮೇಲಕ್ಕೆ ಬಂದ ಬೇರನ್ನು ಅದು ಹಾಗೆಯೇ ಸಾಯಲು ಬಿಡುತ್ತದೆ. ಹೀಗೆ ಗೊತ್ತಾಗದ ರೀತಿಯಲ್ಲಿ ಮರ ತಾನು ಇದ್ದ ಜಾಗವನ್ನು ಖಾಲಿ ಮಾಡಿಬಿಟ್ಟಿರುತ್ತದೆ. ಈ ಪ್ರಕ್ರಿಯೆ ತೀರಾ ನಿಧಾನ. ಅಗತ್ಯವೆನಿಸಿದರೆ ವರ್ಷಕ್ಕೆ ಸುಮಾರು 20 ಮೀಟರ್ನಷ್ಟು ಚಲಿಸಬಲ್ಲವು ಎಂದು ಅಂದಾಜಿಸಲಾಗಿದೆ. ಉತ್ತಮವಾದ ಸೂರ್ಯನ ಬೆಳಕು ಮತ್ತು ಸದೃಢವಾದ ಮಣ್ಣಿರುವ ಜಾಗವನ್ನು ಅವು ಆಯ್ಕೆ ಮಾಡಿಕೊಳ್ಳುತ್ತವೆ.

ಕಾಲುಗಳಂತೆ ಕಾಣುವ ಬೇರುಗಳು:
ಮರಗಳು ಚಲಿಸಬೇಕಾದರೆ ಅವುಗಳ ಬೇರುಗಳು ವಿಭಿನ್ನವಾಗಿರಬೇಕು. ಅದೇ ರೀತಿ ವಾಕಿಂಗ್ ಪಾಮ್ ಮರಗಳ ಬೇರುಗಳು ಕೂಡ ನೀಳವಾಗಿವೆ. ಭೂಮಿಯ ಮೇಲಿಂದ ಕೆಲವು ಅಡಿ ಎತ್ತರಕ್ಕೆ ಅವು ಚಾಚಿಕೊಂಡಿರುತ್ತವೆ. ಅವುಗಳನ್ನು ನೋಡಿದರೆ ಮರಗಳಿಗೆ ಕಾಲುಗಳನ್ನು ಅಂಟಿಸಿದ ಹಾಗೆ ಕಾಣುತ್ತದೆ.

ಮಳೆ ಕಾಡಿನ ಸಸ್ಯ:
ಕೋಸ್ಟಾರಿಕಾ ಮತ್ತು ದಕ್ಷಿಣ ಅಮೆರಿಕದ ಖಂಡದ ಮಳೆಕಾಡುಗಳಲ್ಲಿ ಮಾತ್ರ ವಾಕಿಂಗ್ ಪಾಮ್ ಮರಗಳು ಕಾಣಸಿಗುತ್ತವೆ. ಅದರ ಎಲೆಗಳು ದಪ್ಪ ಮತ್ತು ಉದ್ದವಾಗಿರುತ್ತವೆ. ಸೂರ್ಯನ ಕಿರಣ ಹೆಚ್ಚಿಗೆ ಸಿಕ್ಕಷ್ಟೂ ಅವು ಇನ್ನಷ್ಟು ದಪ್ಪವಾಗಿ ಬೆಳೆಯುತ್ತವೆ. ಎಪಿಫೈಟ್ ಎಂಬ ಸಸ್ಯದ ಹಲವು ಪ್ರಭೇದಗಳು ಈ ಮರದ ಮೇಲೆ ಬೆಳೆಯುತ್ತವೆ. ಮರದ ಬೀಜಗಳನ್ನು ತಿನ್ನಲು ಬರುವ ಜೀರುಂಡೆಗಳ ಮತ್ತು ಇತರ ಕೀಟಗಳಿಂದ ಪರಾಗಸ್ಪರ್ಶ ಕ್ರಿಯೆ ನೆರವೇರುತ್ತದೆ. ಈ ಮರಗಳು ಸುಮಾರು 25 ಮೀಟರ್ ಎತ್ತರಕ್ಕೆ ಬೆಳೆಯಬಲ್ಲವು. ಮನೆಗಳನ್ನು ಕಟ್ಟಲು ಈ ಮರವನ್ನು ಉಪಯೋಗಿಸುತ್ತಾರೆ. ಬೇರುಗಳು ನೀಳವಾಗಿರವುದರಿಂದ ಅವುಗಳನ್ನು ಈಟಿಗಳನ್ನು ತಯಾರಿಸುತ್ತಾರೆ.

ಮರ ಚಲಿಸುವುದು ನಿಜವೇ?
ಮರಗಳು ಚಲಿಸುತ್ತವೆ ಎಂಬುದನ್ನು ವಿಜ್ಞಾನಿಗಳು ನಂಬಲು ಸಿದ್ಧರಿಲ್ಲ. ಆದರೆ, ಮರದ ಬೇರುಗಳು ಭೂಮಿಯಿಂದ 6 ಅಡಿಯಷ್ಟು ಎತ್ತರ ಇರುವ ಕಾರಣ ಬಿಸಿಲಿನ ಕಡೆಗೆ ವಾಲುವುದಕ್ಕೆ ವರದಾನವಾಗಿದೆ. ವರ್ಷಕ್ಕೆ 10ರಿಂದ 20 ಮೀಟರ್ ಜಾಗವನ್ನು ಅವು ಬದಲಿಸಬಲ್ಲವು. ಅಲ್ಲದೇ ಸೂರ್ಯನ ಬೆಳಕು, ನೆಲ ಮತ್ತು ನೀರು ಸಮರ್ಪಕವಾಗಿ ದೊರೆಯುತ್ತಿದ್ದರೆ ಅವುಗಳು ಚಲಿಸುವುದು ತೀರಾ ವಿರಳ. 

ವಿಶ್ವದ ಅತಿ ಎತ್ತರದ ಏಂಜಲ್ ಜಲಪಾತ

ನೀವೆಲ್ಲಾ ಜೋಗ ಜಲಪಾತವನ್ನು ನೋಡಿರುತ್ತೀರಾ ಅಥವಾ ಅದರ ಬಗ್ಗೆ ಕೇಳಿರುತ್ತೀರಾ. ಆದರೆ, ಜೋಗಕ್ಕಿಂತ ನಾಲ್ಕುಪಟ್ಟು ಎತ್ತರವಿರುವ ಏಂಜಲ್ ಜಲಪಾತದ ಬಗ್ಗೆ ಕೇಳಿದ್ದೀರಾ? ಅದು ಎಷ್ಟು ಎತ್ತರವಿದೆಯೆಂದರೆ, ಜಲಪಾತದ ತುದಿಯಿಂದ ಭೂಮಿಯ ಮೇಲೆ ಬೀಳುವ ಮುನ್ನವೇ ಹೆಚ್ಚಿನ ಪ್ರಮಾಣದ ನೀರು ಆವಿಯಾಗಿ ಹೋಗುತ್ತದೆ. ದಕ್ಷಿಣ ಅಮೆರಿಕ ಖಂಡದ ತುತ್ತತುದಿಯಲ್ಲಿರುವ ವಿನಿಜುವೆಲಾದಲ್ಲಿ ಈ ರಮಣೀಯ ಜಲಪಾತವಿದೆ.
 

ಜೋಗಕ್ಕಿಂತ ನಾಲ್ಕುಪಟ್ಟು ಎತ್ತರ:
ಏಂಜಲ್ ಜಲಪಾತ ಒಟ್ಟು 979 ಮೀ.(3,212 ಅಡಿ) ಎತ್ತರವಿದೆ. ಸುಮಾರು 807 (2,648 ಅಡಿ)ಯಿಂದ ನೀರು ಧುಮ್ಮಿಕ್ಕುತ್ತದೆ. ಕನೈಮ ರಾಷ್ಟ್ರೀಯ ಉದ್ಯಾನದ ಆಯನ್-ಟೆಪು  ಪರ್ವತದ ತುದಿಯಿಂದ ಬೀಳುತ್ತದೆ. ಗೌಜಾ ನದಿ ಜಲಪಾತಕ್ಕೆ ನೀರಿನ ಮೂಲ. ಜಲಪಾತದ ನೀರು ಕೆರಪ್ ನದಿಗೆ ಪೂರೈಕೆಯಾಗುತ್ತದೆ. ಜಲಪಾತವು ತಳದಲ್ಲಿ 150 ಮೀಟರ್ ಅಗಲವಾಗಿದೆ. ಪ್ರಮುಖ ಜಲಪಾತದ ತಳದಲ್ಲಿ ಚಿಕ್ಕದಾದ ಇನ್ನೆರಡು ಜಲಪಾತಗಳಿವೆ. ಜೋಗ ಜಲಪಾತವನ್ನು ಹೋಲಿಕೆ ಮಾಡುವುದಾದರೆ, ಜೋಗಕ್ಕಿಂತ ನಾಲ್ಕುಪಟ್ಟು ಎತ್ತರದಿಂದ ನೀರು ಧುಮ್ಮಿಕ್ಕುತ್ತದೆ. ಏಂಜಲ್ ಜಲಪಾತದ ನೀರಿನ ಭೋರ್ಗರೆತ ಯಾವಮಟ್ಟಿಗೆ ಇದೆ ಅಂದರೆ, 1 ಕಿ.ಮೀ. ದೂರದ ವರೆಗೂ ಪ್ರವಾಸಿಗರು ನೀರಿನ ತುಂತುರು ಹನಿಗಳ ಸ್ಪರ್ಶವನ್ನು ಅನುಭವಿಸಬಹುದು.  ಆಫ್ರಿಕಾದ ವಿಕ್ಟೋರಿಯಾ ಜಲಪಾತ, ಉತ್ತರ ಅಮೆರಿಕದ ನಯಾಗರ ಫಾಲ್ಸ್, ದಕ್ಷಿಣ ಅಮೆರಿದ ಇಗುವಾಜು ಫಾಲ್ಸ್ ಬಳಿಕ ಜಗತ್ತಿ ಅತ್ಯಂತ ಸುಂದರ ಜಲಪಾತ ಎಂಬ ಹೆಗ್ಗಳಿಕೆಗೆ ಏಂಜಲ್ ಫಾಲ್ಸ್ ಪಾತ್ರವಾಗಿದೆ.

ಹೆಸರು ಬಂದಿದ್ದು ಹೇಗೆ?
ಸ್ಥಳೀಯ ಜನರು ಈ ಜಲಪಾತವನ್ನು ಕೆರೆಪಾಕುಪೈ ಎಂದು ಹೆಸರಿಸುತ್ತಾರೆ. 1937ರಲ್ಲಿ ಅಮೆರಿಕದ ವಿಮಾನ ಚಾಲಕ ಜಿಮ್ಮಿ ಎಂಜಲ್ ಎಂಬಾತ  ಆಯನ್-ಟೆಪು  ಪರ್ವತದ ಮೇಲೆ ಹಾರಾಟ ನಡೆಸುತ್ತಿದ್ದ ವೇಳೆ ಆತನ ವಿಮಾನ ಪತನಗೊಂಡಿತ್ತು. ಬಳಿಕ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚರಿಸದ ವೇಳೆ ಪರ್ವತದ ತುದಿಯಲ್ಲಿ ಜಲಪಾತ ಇರುವುದನ್ನು ಆತ ಪತ್ತೆ  ಮಾಡಿದ್ದ. ಅಂದಿನಿಂದ ಏಂಜಲ್ ಜಲಪಾತ ಅಂತಲೇ ಪ್ರಸಿದ್ಧಿ ಪಡೆದಿದೆ. ಕನೈಮ ರಾಷ್ಟ್ರೀಯ ಉದ್ಯಾನದಲ್ಲಿರುವ ಮ್ಯೂಸಿಯಂನಲ್ಲಿ ವಿಮಾನವನ್ನು ಪ್ರದರ್ಶನಕ್ಕೆ ಇಡಾಗಿದೆ. ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಜಲಪಾತ ಸ್ಥಾನಪಡೆದಿದೆ.

ಜಲಪಾತ ವೀಕ್ಷಣೆ ಇಂದಿಗೂ ಕಷ್ಟ:
ಏಂಜಲ್ ಜಲಪಾತದಿಂದ ವರ್ಷಪೂರ್ತಿ ನೀರು ಧುಮ್ಮಿಕ್ಕುತ್ತದೆ. ವರ್ಷದ ಸದಾಕಾಲ ಈ ಜಲಪಾತದಲ್ಲಿ ನೀರಿರುತ್ತದೆ. ಮಳೆಗಾಲದಲ್ಲಿ ನೀರಿನ ಭೋರ್ಗರೆತ ಜಾಸ್ತಿ. ಮಳೆಗಾಲದಲ್ಲಿ ಎರಡು ಭಾಗವಾಗಿ ನೀರು ಪರ್ವತದ ಮೇಲಿಂದ ಧುಮ್ಮಿಕ್ಕುತ್ತದೆ. ನದಿಯಲ್ಲಿ ಹೆಚ್ಚಿನ ನೀರಿದ್ದರೆ ಜಲಪಾತ ವೀಕ್ಷಣೆಗೆ ಬೋಟ್ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಏಂಜಲ್ ಜಲಪಾತ ವೆನಿಜುವೆಲಾದ ಪ್ರಸಿದ್ಧ ಪ್ರಸಿದ್ಧ ಪ್ರವಾಸಿ ತಾಣ ಎನಿಸಿಕೊಂಡಿದೆ. ಆದರೆ, ಇಂದಿಗೂ ಜಲಪಾತಕ್ಕೆ ಪ್ರವಾಸ ಕೈಗೊಳ್ಳಲು ಪರಿಶ್ರಮ ಪಡಬೇಕು. ದುರ್ಗಮವಾದ ಕಾಡನ್ನು ದಾಟಿ ಜಲಪಾತದ ಸಮೀಪ ತಲುಪುವುದು ಅಷ್ಟು ಸುಲಭದ ಮಾತಲ್ಲ.



ಬೆಟ್ಟಕೊರೆದು ನಿರ್ಮಿಸಿದ ಬೃಹತ್ ಬುದ್ಧ

ಪ್ರಪಂಚದಲ್ಲಿ ಹಲವಾರು ಬುದ್ಧನ ಮೂರ್ತಿಗಳನ್ನು ನೋಡಿರುತ್ತೀರಿ. ಆದರೆ, ಈ ಬುದ್ಧನ ಮೂತರ್ಿಯನ್ನು ಬೃಹತ್ ಗುಡ್ಡವನ್ನು ಕೊರೆದು ನಿರ್ಮಿಸಲಾಗಿದೆ. ಇದು ಬರೋಬ್ಬರಿ 233 ಅಡಿ ಎತ್ತರವಾಗಿದೆ. ಚೀನಾದ ಟಾಂಗ್ ಸಾಮ್ರಾಜ್ಯದ ಅವಧಿಯಲ್ಲಿ ನಿರ್ಮಿಸಲಾದ ಲೇಷನ್ನ ಬೃಹತ್ ಬುದ್ಧ ಜಗತ್ತಿನ ಅತಿ ಎತ್ತರದ ಕಲ್ಲಿನ ಬುದ್ಧನ ಶಿಲ್ಪ ಎಂದು ಹೆಸರು ಪಡೆದಿದೆ. ಈ ಬೃಹತ್ ಮೂರ್ತಿಯ ಅಗಾಧತೆಯ ಮುಂದೆ ಮನುಷ್ಯ ಏನೇನೂ ಅಲ್ಲ. 1200 ವರ್ಷಗಳಿಂದ ಬಿಸಿಲು ಮಳೆಗೆ ಮೈಯೊಡ್ಡಿ ಈಗಲೂ ಅಸ್ತಿತ್ವ ಕಾಯ್ದುಕೊಂಡಿದೆ. ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ಇದು ಆಕರ್ಷಿಸುತ್ತಿದೆ. 
 


ಬುದ್ಧನ ಮೂರ್ತಿ ನಿರ್ಮಿಸಿದ್ದು ಏಕೆ?
ಚೀನಾದ ಸಿಚುವಾನ್ ಪ್ರಾಂತದ ಮಿಂಜಿಯಾಂಗ್, ದಾಡು ಮತ್ತು ಕ್ವಿಂಗೈ ನದಿಗಳು ಒಂದನ್ನೊಂದು ಸೇರುವ ಕಡೆ ಲೇಷನ್ ಎಂಬಲ್ಲಿ ಬುದ್ಧನ ಮೂರ್ತಿ ಇದೆ. ಈ ನದಿಯಗಳು ಪದೇ ಪ್ರವಾಹಕ್ಕೆ ತುತ್ತಾಗಿ ದೋಣಿಗಳು ಮುಳುಗಿ  ನೂರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರು. ಇದರಿಂದ ಪಾರಾಗುವ ಉಪಾಯ ಹುಡುಕಿದ ಚೀನಾದ ಬೌದ್ಧ ಸನ್ಯಾಸಿ ಹೈಟೊಂಗ್ ಎಂಬಾತ ನದಿಗಳ ಕೋಪವನ್ನು ಶಾಂತಗೊಳಿಸಲು ನದಿಯ ದಂಡೆಯ ಮೇಲಿದ್ದ ಕಲ್ಲಿನ ಬಂಡೆಯನ್ನು ಕೊರೆದು ಬುದ್ಧನ ಮೂರ್ತಿ ಯನ್ನು ನಿರ್ಮಿಸುವ ಸಲಹೆ ನೀಡುತ್ತಾನೆ. ಹೀಗೆ ನಿರ್ಮಾಣವಾಗಿದ್ದೇ ಲೇಷನ್ನ ಬೃಹತ್ ಬುದ್ಧ. 713ರಲ್ಲಿ ಈ ಬುದ್ಧನ ಮೂರ್ತಿಯನ್ನು ನಿರ್ಮಿಸುವ ಕಾರ್ಯ ಆರಂಭವಾಗುತ್ತದೆ. ಆದರೆ, ಹಣಕಾಸಿನ ಕೊರತೆಯಿಂದಾಗಿ ಬುದ್ಧನ ಕೆತ್ತನೆ ಕಾರ್ಯ ಅರ್ಧದಲ್ಲೇ ನಿಂತು ಹೋಗುತ್ತದೆ. ಹೀಗಾಗಿ ಹೈಟೊಂಗ್ನ ಶಿಷ್ಯರು 20 ವರ್ಷ ಭಿಕ್ಷೆ ಬೇಡಿ ಹಣ ಸಂಗ್ರಹಿಸುತ್ತಾರೆ. ಬರೋಬ್ಬರಿ 80 ವರ್ಷಗಳ ಬಳಿಕ ಅಂದರೆ 803ರಲ್ಲಿ ಆತನ ಶಿಷ್ಯಂದಿರು  ಬುದ್ಧನ ಮೂರ್ತಿ ನಿರ್ಮಾಣವನ್ನು ಪೂರ್ಣಗೊಳಿಸುತ್ತಾರೆ. ಬೌದ್ಧರ ಪವಿತ್ರ ಬೆಟ್ಟವೆನಿಸಿದ ಮೌಂಟ್ ಎಮಿಗೆ ಎದುರಾಗಿ ನಿಂತಿರುವ ಬೆಟ್ಟದಲ್ಲಿ ಇದನ್ನು ನಿರ್ಮಿಸಲಾಗಿದೆ. ಗುಡ್ಡವನ್ನು ಕರೆಯುವ ವೇಳೆ ಸಂಗ್ರಹವಾದ ಅಪಾರ ಪ್ರಮಾಣದ ಕಲ್ಲಿನ ಚೂರುಗಳನ್ನು ನದಿಯಲ್ಲಿ ತುಂಬಿ ಪ್ರವಾಹದ ದಿಕ್ಕನ್ನು ಬದಲಿಸಲಾಯಿತು. ಇದರಿಂದ ದೋಣಿಗಳ ಸಂಚಾರಕ್ಕೆ ಸುಗಮವಾಯಿತು. ಜತೆಗೆ ಪ್ರವಾಹವೂ ತಗ್ಗಿತು.

ವಿರಾಟ ಮೂರ್ತಿಯ ವಿಶೇಷತೆ:
ತನ್ನ ನೀಳವಾದ ಕೈಗಳನ್ನು ಮಂಡಿಯ ಮೇಲೆ ಇಟ್ಟು ಕುಳಿತು ಶಾಂತ ಚಿತ್ತದಿಂದ ನದಿಯನ್ನು ನೋಡುತ್ತಿರುವ ಸ್ಥಿತಿಯಲ್ಲಿ ಬುದ್ಧನ ಮೂರ್ತಿಯನ್ನು ಕೆತ್ತಲಾಗಿದೆ. ಕುಳಿತ ಮೈತ್ರೇಯ ಬುದ್ಧನ ಮೂರ್ತಿಯನ್ನು ಇದು ಹೋಲುತ್ತದೆ. ಮೂರ್ತಿಯ ಬುಜಗಳು 28 ಮೀಟರ್ ಅಗಲವಾಗಿವೆ. ಬುದ್ಧನ ಕೈಗಳು 50 ಅಡಿ ಎತ್ತರವಾಗಿವೆ. ಮೂಗು 20 ಅಡಿ ಉದ್ದವಾಗಿದ್ದು, ಎಲ್ಲ ಕೈ ಬೆರಳುಗಳು 10 ಅಡಿ ಉದ್ದವಿವೆ. ಬುದ್ಧನ ಸಂಪೂರ್ಣ ರಚನೆಯನ್ನು ಕಲ್ಲಿನಿಂದಲೇ ಕೆತ್ತಲಾಗಿದೆ. ಆದರೆ, ಮರದಿಂದ ಮಾಡಿದ ಕಿವಿಯನ್ನು ಅಳವಡಿಸಲಾಗಿದೆ. ಬುದ್ಧನ ತಲೆಯ ಮೇಲೆ ಗುಂಗುರು ಕೂದಲಿನ ರಚನೆಯನ್ನು ಮಾಡುವ ಸಲುವಾಗಿ 1,021 ಉಬ್ಬುಗಳನ್ನು ಕೊರಯಲಾಗಿದೆ. ಅದಕ್ಕೆ ಕರಿಯ ಬಣ್ಣ ಬಳಿಯಲಾಗಿದ್ದು, ಕೆತ್ತನೆಗಳಿವೆ. ಮೂರ್ತಿಯ ಮೇಲೆ ನೀರು ಸಂಗ್ರಹಗೊಂಡು ಅದು ಕುಸಿದು ಬೀಳಬಾರದು ಎಂಬ ಕಾರಣಕ್ಕೆ ಗುಪ್ತವಾದ ಕಾಲುವೆಗಳನ್ನು ಕೊರೆಯಲಾಗಿದೆ. ಕೈ ಮತ್ತು ತಲೆಯ  ಭಾಗದಲ್ಲಿ ಈ ಕಾಲುವೆಗಳಿವೆ. ಇನ್ನೊಂದು ವಿಶೇಷವೆಂದರೆ ಬುದ್ಧನ ಮೂರ್ತಿಯನ್ನು ನೈಸಗರ್ಗಿಕ ಬಣ್ಣಗಳಿಂದ ಅಲಂಕಾರ ಮಾಡಲಾಗಿದೆ. ಮೆಟ್ಟಿಲುಗಳನ್ನು ಏರಿ ಮೂರ್ತಿಯ ತಲೆಯವರೆಗೂ ತಲುಪಬಹುದು. ಇದಕ್ಕಾಗಿ ಪಕ್ಕದಲ್ಲಿ 3500 ಕಿರಿದಾದ ಮೆಟ್ಟಿಲುಗಳನ್ನು ಕೊರಯಲಾಗಿದೆ. ಜತೆಗೆ ನದಿಯಲ್ಲಿ ದೋಣಿ ಸವಾರಿ ಮಾಡುತ್ತಾ ಬುದ್ಧನ ಭವ್ಯ ರೂಪವನ್ನು ನೋಡಬಹುದು. 

ಪಾರಂಪರಿಕ ತಾಣ:
ಗಾಳಿ ಮಳೆಗೆ ಶಿಥಿಲಗೊಂಡಿದ್ದ ಈ ಮೂರ್ತಿಯನ್ನು ಚೀನಾ ಸರ್ಕಾರ 1963ರಲ್ಲಿ ಪುನರುತ್ಥಾನ ಮಾಡಿತ್ತು. 1966ರ  ಬಳಿಕ ಇದನ್ನು ವಿಶ್ವ ಪಾರಂಪರಿಕ ತಾಣವಾಗಿ ಸಂರಕ್ಷಿಸಲಾಗುತ್ತಿದೆ.

ಇದು ಭೂಮಿಯ ಮೇಲಿನ ಚಂದ್ರಲೋಕ

ಗಗನಯಾತ್ರಿ ನೀಲ್ ಆರ್ಮ್ಟ್ರಾಂಗ್ ಚಂದ್ರನ ಮೇಲಿಳಿದು ನಡೆದಾಡಿದ. ಆದರೆ, ಚಂದ್ರನಲ್ಲಿ ವಾತಾವರಣ ಹೇಗಿದೆ. ಅಲ್ಲಿ ಹೋದರೆ ಯಾವರೀತಿಯ ಅನುಭವ ಆಗುತ್ತದೆ ಎಂಬುದನ್ನು ಭೂಮಿಯಲ್ಲಿಯೇ ಕಾಣಬಹುದು. ಹೌದು, ಭೂಮಿಯ ಮೇಲೂ ಒಂದು ಚಂದ್ರಲೋಕವಿದೆ! ಅದು ಭೂಮಿಯ ಮೇಲಿನ ಅತ್ಯಂತ ಒಣ ಪ್ರದೇಶ ಎನಿಸಿರುವ ಚಿಲಿ ದೇಶದ ಅಟಕಾಮಾ ಮರುಭೂಮಿ. ಸ್ಯಾನ್ ಪೆಡ್ರೋ ಡಿ ಎಂಬಲ್ಲಿಂದ 13 ಕಿ.ಮೀ. ದೂರದಲ್ಲಿರುವುದೇ ಎಲ್ ವ್ಯಾಲೆ ಡೆ ಲಾ ಲುನಾ. ಇದು ಚಂದ್ರದ ಕಣಿವೆ ಎಂದೇ ಕರೆಸಿಕೊಂಡಿದೆ. ಸಾವಿರಾರು ವರ್ಷಗಳಿಂದ ನೀರು ಮತ್ತು ಗಾಳಿಯ ರಭಸದಿಂದ ನಿಮರ್ಮಾಣಗೊಂಡ ವಿವಿಧ ಕಲ್ಲಿನ ಮತ್ತು ಮರಳು ರಚನೆಗಳು, ಮಣ್ಣಿನ ಬಣ್ಣ ಚಂದ್ರನ ಮೇಲ್ಮೈ ಅನ್ನು ನೆನಪಿಸುತ್ತದೆ.



ಚಂದ್ರನಂತಿರುವ ಮೇಲ್ಮೈ:
ವ್ಯಾಲೆ ಡೆ ಲಾ ಲುನಾ ಭೂಮಿಯ ಮೇಲಿನ ಅತಿ ಒಣ ಪ್ರದೇಶ  ಎಂದು ಕರೆಸಿಕೊಂಡಿದೆ. ನೂರಾರು ವರ್ಷದಿಂದ ಇಲ್ಲಿ ಒಂದೇ ಹನಿ ನೀರು ಕೂಡ ಬಿದ್ದಿಲ್ಲ. ಇಲ್ಲಿ ಮಳೆಯಾಗದ ಕಾರಣ ನದಿಗಳು ಸಂಪೂರ್ಣ ಬತ್ತಿಹೋಗಿವೆ. ವಾತಾವರಣದಲ್ಲಿ ಸ್ವಲ್ಪವೂ ನೀರಿನ ಅಂಶ ಇಲ್ಲ. ಈ ಕಾರಣಕ್ಕೆ ಬತ್ತಿಹೋಗಿರುವ ನದಿಗಳ ತಳದಲ್ಲಿ ಉಳಿದುಕೊಂಡಿರುವ ಉಪ್ಪುನಿಂದ ನೆಲದ ಮೇಲೆ ಬಿಳಿ ಪದರ ಸೃಷ್ಟಿಯಾಗಿದೆ. ಅಲ್ಲದೆ, ಇಲ್ಲಿ ಸಣ್ಣಪುಟ್ಟ ಗುಡ್ಡದ ರಚನೆಗಳನೂ ಕಾಣಬಹುದು.

ವಿಜ್ಞಾನಿಗಳ  ಪ್ರಯೋಗ ಶಾಲೆ:

ಯುರೋಪಿನ ಬಾಹ್ಯಾಕಾಶ ವಿಜ್ಞಾನಿಗಳು ಮಂಗಳ ಶೋಧಕ ನೌಕೆಯ ಅಣಕು ಕಾಯರ್ಯಾ ಚರಣೆಗೆ ವ್ಯಾಲೆ ಡೆ ಲಾ ಲುನಾಯನ್ನು ಬಳಸಿಕೊಂಡಿದ್ದರು. ಭೂಮಿಯ ಮೇಲೆ ಜೀವಿಗಳ ಉಗಮದ ಕುರುತು ಅಧ್ಯಯನ ನಡೆಸಲು ಇದು ಸೂಕ್ತ ಸ್ಥಳ. ಇಲ್ಲಿನ ನೈಸಗರ್ಗಿಕ ಸೌಂದರ್ಯವನ್ನು ಕಾಪಾಡುವ ಸಲುವಾಗಿ 1982ರಲ್ಲಿ ಇದನ್ನು ರಾಷ್ಟ್ರೀಯ ಅಭಯಾರಣ್ಯ ಎಂದು ಚಿಲಿ ಸರ್ಕಾರ ಘೋಷಿಸಿದೆ.

ಸೂಯರ್ಾಸ್ತ ನೋಡುವುದೇ ಚಂದ:
ಇಲ್ಲಿಗೆ ಪ್ರವಾಸಿಗರು ಭೇಟಿ ನೀಡಲು ಸಂಜೆಯ ವೇಳೆ ಸೂಕ್ತ ಸಮಯ. ಇಲ್ಲಿನ ಮನೋಜ್ಞ ಸೂಯರ್ಯಾಸ್ತ ಮತ್ತೆಲ್ಲೂ ನೋಡಲು ಸಿಗಲಾರದು. ಸೂರ್ಯ ಮುಳುಗುತ್ತಿದ್ದಂತೆ ಆಕಾಶ ರತ್ನದ ಹರಳಿನಂತೆ ಹೊಂಬಣ್ಣಕ್ಕೆ ತಿರುಗುತ್ತದೆ. ಹುಣ್ಣಿಮೆಯ ಬೆಳಕಿನಲ್ಲಿ ಇದು ಭೂಮಿಯೇ ಅಲ್ಲವೇನೋ ಎನ್ನುವ ರೀತಿಯಲ್ಲಿ ಕಂಡುಬರುತ್ತದೆ.

Tuesday, November 1, 2016

ಲೇಹ್- ಮನಾಲಿ ಹೆದ್ದಾರಿ

  • ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆ

ಹೆದ್ದಾರಿ ಅಂತಿಂಥ ಹೆದ್ದಾರಿಯಲ್ಲ. ಸ್ವಲ್ಪ ಆಯ ತಪ್ಪಿದರೂ ಸಾವು ಗ್ಯಾರೆಂಟಿ. ಪ್ರಕೃತಿ ಸೌಂದರ್ಯದ ಜತೆ ಎದೆ ನಡುಗುವ ಕಿರಿದಾದ ಕಣಿವೆಗಳು, ಬೆಟ್ಟ ಕೊರೆದು ನಿರ್ಮಿಸಿದ ರಸ್ತೆಗಳು, ಏರು ತಗ್ಗು, ಅಪಾಯಕಾರಿ ಸೇತುವೆಗಳನ್ನು ದಾಟಿದರಷ್ಟೇ ಮುಂದೆ ಹೋಗಲು ಸಾಧ್ಯ. ಈ ಕಾರಣಕ್ಕೆ ಲೇಹ್- ಮನಾಲಿ ಹೆದ್ದಾರಿ ವಿಶ್ವದಲ್ಲೇ ಅತ್ಯಂತ ಅಪಾಯಕಾರಿ ರಸ್ತೆ ಎನಿಸಿಕೊಂಡಿದೆ.

ಹಿಮಾಲಯ ಶಿಖರಗಳ ಸಂದುಗೊಂದಿನಲ್ಲಿ ಸಾಗುವ ಈ ಹೆದ್ದಾರಿ ದೇಶದ ಅತ್ಯಂತ ಎತ್ತರದ ಕಣಿವೆ ಮಾರ್ಗಗಳಲ್ಲಿ ಒಂದಾಗಿದೆ. 479 ಕಿ.ಮೀ. ದೂರ ಇರುವ ಈ ಹೆದ್ದಾರಿಯನ್ನು ಭಾರತೀಯ ಸೇನೆ ನಿರ್ಮಿಸಿ ನಿರ್ವಹಣೆ ಮಾಡುತ್ತಿದೆ.
ಜೂನ್ ಮತ್ತು ಮಧ್ಯ ಸೆಪ್ಟೆಂಬರ್ವರಗೆನ ನಾಲ್ಕೂವರೆ ತಿಂಗಳು ಮಾತ್ರ ಈ ಹೆದ್ದಾರಿ ಸಂಚಾರಕ್ಕೆ ತೆರೆದುಕೊಳ್ಳುತ್ತದೆ. ಉಳಿದ ಸಂದರ್ಭದಲ್ಲಿ ಇಲ್ಲಿ ವಾಹನ ಸಂಚಾರವೇ ಇರುವುದಿಲ್ಲ. ಅಕ್ಟೋಬರ್ನಲ್ಲಿ ಇಲ್ಲಿ ಭಾರೀ ಪ್ರಮಾಣದ ಹಿಮಪಾತವಾಗುವುದರಿಂದ ರಸ್ತೆ ಹಿಮದಲ್ಲಿ ಮುಚ್ಚಿಹೋಗುತ್ತದೆ. ಕೆಲವೊಮ್ಮೆ 40 ಅಡಿಯಷ್ಟು ಹಿಮ ಆವರಿಸುತ್ತದೆ. ಅಲ್ಲದೆ, ರಸ್ತೆಯ ಮೇಲೆ ಹಿಮ ಬಿದ್ದಿರುವುದರಿಂದ ಇದು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಕ್ಷಣ ಕ್ಷಣಕ್ಕೂ ಇಲ್ಲಿನ ವಾತಾವರಣ ಬದಲಾಗುತ್ತಿರುತ್ತದೆ. ಹೀಗಾಗಿ ಈ ರಸ್ತೆಯಲ್ಲಿ ಸಂಚರಿಸುವುದಕ್ಕೂ ಮುನ್ನು ಹತ್ತು ಬಾರಿ ಯೋಚಿಸಬೇಕು. ಹೆಚ್ಚುವರಿಯಾಗಿ ಪ್ರೆಟ್ರೋಲ್ ಅಥವಾ ಡೀಸೆಲ್ ಒಯ್ಯದಿದ್ದರೆ ಮುಂದೆ ಸಂಚರಿಸಲು ಆಗದೇ ಹಿಂತಿರುಗಲೂ ಆಗದೆ ಪೇಚಿಗೆ ಸಿಲುಕಬೇಕಾಗುತ್ತದೆ.

ಪ್ರಯಾಣ ತುಂಬಾ ನಿಧಾನ:
ಜಮ್ಮು- ಕಾಶ್ಮೀರದ ಲಡಾಖ್ನ  ಲೇಹ್ನಿಂದ ಹಿಮಾಚಲ ಪ್ರದೇಶದ ಮನಾಲಿಯನ್ನು ಈ ಹೆದ್ದಾರಿ ಸಂಪರ್ಕಿಸುತ್ತದೆ. ಈ ಹೆದ್ದಾರಿಯ ಮಧ್ಯೆ ಬರುವ ಟಗ್ಲಾಂಗ್ ಲಾ ಮೌಂಟೇನ್ ಪಾಸ್ 17,480 ಎತ್ತದಲ್ಲಿದೆ. ಚೀನಾ ಮತ್ತು ಪಾಕಿಸ್ತಾನದ ಲಡಾಖ್ ಮೂಲಕ ಈ ಹೆದ್ದಾರಿ ಹಾದು ಹೋಗುವುದರಿಂದ ಭಾರತದ ಮಟ್ಟಿಗೆ ರಾಜತಾಂತ್ರಿಕವಾಗಿ ಮಹತ್ವದ ಪಾತ್ರ ವಹಿಸುತ್ತಿದೆ. ಇಲ್ಲಿ ವಾಹನ ಸಂಚಾರ ಎಷ್ಟು ನಿಧಾನವೆಂದರೆ ಜೀಪಿನಲ್ಲಾದರೆ ಮನಾಲಿಯಿಂದ ಲೇಹ್ಗೆ ಪೂರ್ತಿ ಒಂದು ದಿನದ ಬೇಕಾಗುತ್ತದೆ. ಬಸ್ನಲ್ಲಿ ಪ್ರಯಾಣಿಸಿದರೆ ಎರಡು ದಿನಗಳಿಗೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.

ಹಿಮಾಲಯದ ಹತ್ತಿರ ದರ್ಶನ:
ಈ ಹೆದ್ದಾರಿ ಇಷ್ಟೊಂದು ಅಪಾಯಕಾರಿಯಾಗಿದ್ದರೂ ಭಾರತ ಮಾತ್ರವಲ್ಲ, ವಿಶ್ವದೆಲ್ಲೆಡೆಯಿಂದ ಪ್ರವಾಸಿಗರು ಈ ಮಾರ್ಗದಲ್ಲಿ ಸಂಚರಿಸಲು ಇಷ್ಟ ಪಡುತ್ತಾರೆ. ಹಿಮಾಲಯದ ಗಿರಿಶಿಖರಗಳನ್ನು ತೀರಾ ಹತ್ತಿರದಿಂದ ನೋಡುವ ಅವಕಾಶ ಇರುವುದು ಈ ಹೆದ್ದಾರಿ ಮೂಲಕ ಮಾತ್ರ. ಇಲ್ಲಿ ಕಾರು ಜೀಪುಗಳು ಅಷ್ಟೇ ಅಲ್ಲ, ಸರಕುಗಳನ್ನು ತುಂಬಿದ ಭಾರೀ ತೂಕದ ಲಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚಿರಿಸುತ್ತವೆ. ಮಳೆ ಬಂದರಂತೂ ರಸ್ತೆಯಲ್ಲಿ ಓಡಾಡುವುದೇ ದುಸ್ತರ. ಕೆಸರುಗದ್ದೆಯಂತಾಗಿ ಲಾರಿ ಚಕ್ರಗಳು ಹೂತು ಹೋಗುತ್ತವೆ. ನದಿ ತೊರೆಗಳು ರಸ್ತೆಯಲ್ಲೇ ಹರಿಯುತ್ತಿರುತ್ತವೆ.
ಈ ಹೆದ್ದಾರಿ ಸಾವಿರಾರು ಅಡಿ ಎತ್ತರದಲ್ಲಿ ಇರುವುದರಿಂದ ಆಮ್ಲಜನಕದ ಕೊರತೆಯೂ ಉಂಟಾಗಬಹುದು. ಸಿರ್ ಭೂಮ್ ಚೂಮ್ ಎಂಬಲ್ಲಿ ಸಲ್ಪಮಟ್ಟಿನ ಸಮತಟ್ಟಾದ ಪ್ರದೇಶವಿದ್ದು, ರಾತ್ರಿಯ ವೇಳೆ ಟೆಂಟ್ ಹಾಕಿಕೊಂಡು ವಿಶ್ರಾಂತಿ ಪಡೆದು ಮರುದಿನ ಪ್ರಾಣ ಮುಂದುವರಿಸಬಹುದು.

ಮಾಜುಲಿ ಎಂಬ ಜಗತ್ತಿನ ಅತಿದೊಡ್ಡ ನದಿ ದ್ವೀಪ

ಬ್ರಹ್ಮಪುತ್ರ ನದಿ ತನ್ನ ವಿಸ್ತಾರ ಮತ್ತು ಅಗಾಧತೆಗೆ ಹೆಸರು ಪಡೆದಿದೆ. ಇದರ ಒಂದು ದಂಡೆಯಿಂದ ಇನೊಂದು ದಂಡೆಗೆ 15 ಮೈಲಿಗಳ ಅಂತರವಿದೆ. ಈ ವಿಸ್ತಾರವಾದ ನದಿಯಲ್ಲಿ ಸಾವಿರಾರು ದ್ವೀಪಗಳಿವೆ. ಅವುಗಳಲ್ಲಿ ಅಸ್ಸಾಂನಲ್ಲಿರುವ ಮಾಜುಲಿ ಕೂಡ ಒಂದು. ಈ ದ್ವೀಪವು ಜಗತ್ತಿನಲ್ಲಿಯೇ ಅತಿದೊಡ್ಡದಾದ ನದಿ ಮಧ್ಯದ ದ್ವೀಪವಾಗಿದೆ. ಅಲ್ಲದೇ ಇದು ಅಸ್ಸಾಂನ ಸಾಂಸ್ಕೃತಿಕ ರಾಜಧಾನಿ ಕೂಡ ಹೌದು. ಇಲ್ಲಿನ ಪ್ರಕೃತಿ ಸೌಂದರ್ಯ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. 

ಪ್ರವಾಹದಿಂದ ಸೃಷ್ಟಿಯಾದ ದ್ವೀಪ:
ಮಾಜುಲಿ ದ್ವೀಪ ಮೂಲದಲ್ಲಿ 1250 ಚದರ ಕಿ.ಮೀ. ಪ್ರದೇಶವನ್ನು ವ್ಯಾಪಿಸಿತ್ತು. ಆದರೆ ಈಗ ಅದರ ವಿಸ್ತಾರ ಕೇವಲ 500 ಚದರ ಕಿ.ಮಿ.ಗೆ ಇಳಿದಿದೆ. ದಕ್ಷಿಣ ಏಷ್ಯಾದ ಅತಿದೊಡ್ಡ ಸಿಹಿ ನೀರಿನ ದ್ವೀಪ ಎನಿಸಿಕೊಂಡಿದೆ.
ಜೊರ್ಹತ್ ಮಾಜುಲಿಗೆ ಹತ್ತಿರವಾದ ಪ್ರದೇಶ. ಅಲ್ಲಿಂದ ದೋಣಿ ಹಾಗೂ ಫೆರ್ರಿ (ತೆಪ್ಪ)ದ ಮೂಲಕ ಮಾಜುಲಿ ತಲುಪ ಬಹುದಾಗಿದೆ. ಇಲ್ಲಿ ಅನಿವಾಸಿ ಬುಡಕಟ್ಟು ಜನರೇ ಹೆಚ್ಚಾಗಿದ್ದು, ಮಿಶಿಂಗ್, ದೇಯೋರಿ, ಸೋನೋವಾಲ್ ಕಚಾರಿಸ್ ಸಮುದಾಯಗಳನ್ನು ಕಾಣಬಹುದು. ಈ ದ್ವೀಪದಲ್ಲಿ 144 ಗ್ರಾಮಗಳಿವೆ. ಸುಮಾರು ಒಂದೂವರೆ ಲಕ್ಷ ಜನಸಂಖ್ಯೆ ಇದೆ. ಇಲ್ಲಿ ಹಿಂದುಗಳು ಮಾತ್ರ ನೆಲೆಸಿದ್ದಾರೆ ಎನ್ನುವುದು ಕೂಡ ಈ ದ್ವೀಪದ ಇನ್ನೊಂದು ವಿಶೇಷ. 1661-1696 ರಲ್ಲಿ ಸಂಭವಿಸಿದ ಭೀಕರ ಭೂಕಂಪ ಎತ್ತರ ಮತ್ತು ತಗ್ಗು ಪ್ರದೇಶಗಳನ್ನು ನಿರ್ಮಾಣ ಮಾಡಿತ್ತು. ಆ ಬಳಿಕ 1750ರಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಮಾಜುಲಿ ದ್ವೀಪ ಸೃಷ್ಟಿಯಾಯಿತು. ಸುಮಾರು 2 ವಾರಗಳ ಕಾಲ ನಿರಂತರ ಪ್ರವಾಹಕ್ಕೆ ಅಸ್ಸಾಂ ತುತ್ತಾಗಿತ್ತು.

ಪಕ್ಷಿ ಪ್ರಿಯರ ಸ್ವರ್ಗ
ಈ ದ್ವೀಪದಲ್ಲಿ ಅಪಾರವಾದ ಜಲರಾಶಿ ಇರುವುದರಿಂದ ಮತ್ತು ಜೀವ ವೈವಿಧ್ಯ ವ್ಯವಸ್ಥೆಯಿಂದಾಗಿ ಸಸ್ಯ  ಮತ್ತು ಪ್ರಾಣಿ ಸಂಕುಲಗಳು ಅಪಾರ ಪ್ರಮಾಣದಲ್ಲಿವೆ. ಚಳಿಗಾಲದಲ್ಲಿ ವಲಸೆ ಹಕ್ಕಿಗಳಿಗೆ ಮಾಜುಲಿ  ನೆಚ್ಚಿನ ತಾಣ. ಸೈಬೇರಿಯಾದ ವೈಟ್ ಕ್ರೇನ್, ಬಾತುಕೋಳಿ ಮತ್ತು ಪೆಲಿಕಾನ್ ಹಕ್ಕಿಗಳು ಇಲ್ಲಿಗೆ ವಲಸೆ ಕೈಗೊಳ್ಳುತ್ತವೆ. ಈ ಕಾರಣಕ್ಕೆ ಹಕ್ಕಿ ವೀಕ್ಷಕರು ಮತ್ತು ಛಾಯಾಗ್ರಾಹಕರಿಗೆ ಮಾಜುಲಿ ಸ್ವರ್ಗ ಎನಿಸಿಕೊಂಡಿದೆ. ಅಕ್ಟೋಬರ್ ಮತ್ತು ಮಾರ್ಚ್ ಮಾಜುಲಿಗೆ ಭೇಟಿ ನೀಡಲು ಪ್ರಶಸ್ತವಾದ ಕಾಲ. ದೋಣಿಯಲ್ಲಿ ವಿಹರಿಸುತ್ತಾ ಪರಿಸರ ಸೌಂದರ್ಯವನ್ನು ಸವಿಯಬಹುದು.

ಸಂಸ್ಕೃತಿಯ ತವರು
ಕಲೆ, ಸಂಗೀತ,  ನೃತ್ಯ, ಜ್ಯೋತಿಷ್ಯ ಶಾಸ್ತ್ರ, ಇಲ್ಲಿನ ಜನರ ಪ್ರಮುಖ ಚಟುವಟಿಕೆ. ಇಲ್ಲಿ ದೊಡ್ಡ ದೊಡ್ಡ ದೇವಾಲಯಗಳಿಲ್ಲ, ಚಿನ್ನ ಮತ್ತು ಬೆಳ್ಳಿಗಳನ್ನು ಹೆಚ್ಚಾಗಿ ಬಳಸುವುದಿಲ್ಲ. ಸರಳತೆಯೇ ಇಲ್ಲಿನ ಜನರ ವಿಶೇಷತೆ. ಹಿಂದಿನಿಂದ ಅನುಸರಿಸಿಕೊಂಡು ಬಂದ ಸಂಸ್ಕೃತಿಯನ್ನು ಇಂದಿಗೂ ಪಾಲಿಸಿಕೊಂಡು ಬರಲಾಗುತ್ತಿದೆ. ಮೀನುಗಾರಿಕೆ, ಮತ್ತು ದೋಣಿ ನಡೆಸುವುದು ಇಲ್ಲಿನ ಜನರ ಪ್ರಮುಖ ಉದ್ಯೋಗ.

ಮುಳುಗುತ್ತಿರುವ ದ್ವೀಪ
1853ರಲ್ಲಿ ಮಾಜುಲಿ ದ್ವೀಪ  1,150 ಕಿ.ಮೀ. ವ್ಯಾಪ್ತಿಗೆ ವಿಸ್ತಿರಿಸಿಕೊಂಡಿತ್ತು. 20ನೇ ಶತಮಾನದಲ್ಲಿ ದ್ವೀಪ ಶೇ.33ರಷ್ಟು ಭೂ ಪ್ರದೇಶವನ್ನು ಕಳೆದುಕೊಂಡಿದೆ. 1991ರ ವರೆಗೆ ಸುಮಾರು 35 ಗ್ರಾಮಗಳು ನೀರುಪಾಲಾಗಿವೆ. ಸಮೀಕ್ಷೆಯೊಂದರ ಪ್ರಕಾರ ಮುಂದಿನ 15ರಿಂದ 20 ವರ್ಷಗಳಲ್ಲಿ ದ್ವೀಪ ಪ್ರವಾಹ ಮತ್ತು ತಾಪಮಾನ ಏರಿಕೆಯ ಪರಿಣಾಮವಾಗಿ ದ್ವೀಪ ಸಂಪೂರ್ಣ ಮುಳುಗಿ ಹೋಗುವ ಅಪಾಯ ಎದುರಿಸುತ್ತಿದೆ. 

ಪರೋಪಕಾರಿ ಕಾಂಡ್ಲಾವನಗಳು

ಸಾಮಾನ್ಯವಾಗಿ ಪ್ರಾಣಿಗಳು ತಮ್ಮ ಮರಿಗಳನ್ನು ಪೋಷಿಸಿ ಬೆಳೆಸುತ್ತವೆ. ಆದರೆ, ಇದು ಕೇವಲ ಪ್ರಾಣಿಗಳಿಗಷ್ಟೇ ಸೀಮಿತವಾಗಿಲ್ಲ. ಸಮುದ್ರದ ಅಂಚಿನಲ್ಲಿ ಬೆಳೆಯುವ ಕಾಂಡ್ಲಾ ಅಥವಾ ಮ್ಯಾಂಗ್ರೋವ್ ಗಿಡಗಳು ಪ್ರಾಣಿ ಮತ್ತು ಜಲಚರಗಳಿಗೆ ಆಶ್ರಯ ನೀಡಿ ಪರೋಪಕಾರಿ ಎನಿಸಿಕೊಂಡಿವೆ. ಇವುಗಳ ಬಲಿಷ್ಠವಾದ ಬೇರುಗಳು ಸಮುದ್ರದ ಅಲೆಗಳಿಗೂ ತಡೆಯೊಡ್ಡಿ ನಿಲ್ಲುತ್ತವೆ. ಹೀಗಾಗಿ ಈ ಸಸ್ಯಕ್ಕೆ ಕಡಲ ತಡಿಯ ರಕ್ಷಕ ಎಂಬ ಬಿರುದು ನೀಡಲಾಗಿದೆ.






ಪರೋಪಕಾರಿ ಗಿಡ
ನದಿ ಇಕ್ಕೆಲಗಳಲ್ಲಿ ಬೆಳೆದು ನಿಲ್ಲುವ ಈ ಕಾಂಡ್ಲಾಗಳ ಬೇರುಗಳು ತುಂಬಾ ಆಳಕ್ಕೆ ಇಳಿಯುತ್ತವೆ. ನೀರಿನಿಂದ ಮೇಲೆ ಹಾಗೂ ನೀರಿನ ಆಳದಲ್ಲಿರುವ ಈ ಬೇರುಗಳ ನಡುವೆ ಜಲಚರಗಳು ಭಾರೀ ಪ್ರಮಾಣದಲ್ಲಿ ಬೀಡುಬಿಟ್ಟಿರುತ್ತವೆ. ಕಾಂಡ್ಲಾವನಗಳು ಹಲವಾರು ಜಾತಿಯ ಪಕ್ಷಿಗಳು ಮತ್ತು ಪ್ರಾಣಿಗಳ ಆಹಾರದ ಮೂಲ. ಈ ಗಿಡಗಳ ಮೇಲೆ ಬಂದು ಕೂರುವ ಹಕ್ಕಿಗಳ ಹಿಕ್ಕೆಗಳು ಜಲಚರಗಳಿಗೆ ಆಹಾರವಾಗುತ್ತವೆ. ಏಡಿ, ಶಿಗಡಿ, ಚಿಪ್ಪು, ಮೀನುಗಳು ಯತೇಚ್ಛವಾಗಿ ಇಲ್ಲಿ ನೆಲೆನಿಂತು ಸಂತಾನೋತ್ಪತ್ತಿಯಲ್ಲಿ ತೊಡಗಿಕೊಳ್ಳುತ್ತವೆ. ಹಕ್ಕಿಗಳೂ ಅಷ್ಟೆ ತಮ್ಮ ಸಂಸಾರವನ್ನು ಬೆಳೆಸಲು ಕಾಂಡ್ಲಾವನಗಳತ್ತ ವಲಸೆ ಬರುತ್ತವೆ. ಕಾಂಡ್ಲಾ ಗಿಡಗಳು ಅತ್ಯಧಿಕ ಪ್ರಮಾಣದಲ್ಲಿ ಇಂಗಾಲವನ್ನು  ಹೀರಿಕೊಂಡು ವಾತಾವರಣವನ್ನು ತಂಪಾಗಿರಿಸುತ್ತವೆ.

ಉಪ್ಪು- ಸಿಹಿ ನೀರಿನಲ್ಲಿ ಬೆಳೆಯುವ ಸಸ್ಯ
ಈ ಸಸ್ಯದ ವಿಶೇಷತೆಯೆಂದರೆ ಉಪ್ಪು ಮತ್ತು ಸಿಹಿ ನೀರು ಎರಡರಲ್ಲಿಯೂ ಬೆಳೆಯುತ್ತದೆ. ಇವು ಸಮಾನ್ಯವಾಗಿ ಸಮುದ್ರದ ಉಪ್ಪು ನೀರು ಹಾಗೂ ಸಿಹಿ ನೀರು ಒಂದಕ್ಕೊಂದು ಕೂಡುವ ಅಳಿವೆ ಅಥವಾ ಜೌಗು ಪ್ರದೇಶಗಲ್ಲಿ ಹೇರಳವಾಗಿ ಕಂಡುಬರುತ್ತದೆ. ರಾಜ್ಯದಲ್ಲಿ ಪ್ರಮುಖವಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಹಿನ್ನೀರಿನ ಪ್ರದೇಶದಲ್ಲಿ ಕಾಂಡ್ಲಾವನಗಳನ್ನು ಕಾಣಬಹುದು. ಪಶ್ಚಿಮ ಬಂಗಾಳದ  ಸುಂದರ ಬನದಲ್ಲಿ ವಿವಿಧ ಜಾತಿಯ ಕಾಂಡ್ಲಾ ಸಸ್ಯಗಳಿವೆ. ಅಂಡಮಾನ್ ನಿಕೋಬಾರ್ ದ್ವೀಪ ಸಮೂಹಗಳಲ್ಲಿ ಹೇರಳವಾಗಿ ಇವುಗಳನ್ನು ಕಾಣಬಹುದು.
 ಇಂತಹ ಪ್ರದೇಶಗಳಲ್ಲಿ ನೀರು ಹಾಗೂ ಮಣ್ಣು ಹೆಚ್ಚಿನ ಉಪ್ಪಿನ ಅಂಶವನ್ನು ಹೊಂದಿದ್ದು, ನೀರಿನ ಉಬ್ಬರ ಇಳಿತದ  ತೀವ್ರ ಹೊಡೆತಕ್ಕೆ ಒಳಪಟ್ಟಿರುತ್ತವೆ. ಹೀಗಾಗಿ ಇಲ್ಲಿ ಇತರ ಯಾವುದೇ ಸಸ್ಯಗಳು ಬೆಳೆಯುವುದಿಲ್ಲ. ಆದರೆ, ಕಾಂಡ್ಲಾಗಳು ತನ್ನ ಹುಟ್ಟು ಮತ್ತು ಬೆಳವಣಿಗೆಯಲ್ಲಿ ಎಲ್ಲಾ ಸಸ್ಯ ವರ್ಗಕ್ಕಿಂತ ವಿಶಿಷ್ಟ ಸ್ವರೂಪವನ್ನು ಹೊಂದಿದ ಸ್ವಾವಲಂಬಿ ಸಸ್ಯ. ಇದನ್ನು ಮ್ಯಾಂಗ್ರೋವ್ ಗಿಡ ಎಂತಲೂ ಕರೆಯುತ್ತಾರೆ. 

ಸುನಾಮಿ ಅಲೆಗಳಿಂದ ರಕ್ಷಣೆ
ಕಾಂಡ್ಲಾ ಸಸ್ಯಗಳು ನೀರಿನಲ್ಲಿನ ನೈಟ್ರೇಟ್ ಅಂಶವನ್ನು ಹೀರಿಕೊಂಡು ಬೆಳೆಯುತ್ತವೆ. ನೀರಿನ ಹರಿವು ಇರುವ ಜಾಗದಲ್ಲಿ ಹಿಂಡು ಹಿಂಡಾಗಿ ಬೆಳೆದು ಜೌಗು ಸವೆತವನ್ನು ತಡೆಯುತ್ತವೆ. ಚಂಡಮಾರುತ ಎದ್ದಾಗ, ಸುಂಟರಗಾಳಿ ಬಂದಾಗ, ಸುನಾಮಿ ಏಳುವ ಸಂದರ್ಭದಲ್ಲಿಯೂ ಪ್ರತಿರೋಧ ಒಡ್ಡಿ ಭೀಕರ ಅಲೆಗಳ ವೇಗಕ್ಕೆ ಕಡಿವಾಣ ಹಾಕುತ್ತವೆ. ನದಿ ನೀರಿನಿಂದ ಕೊಚ್ಚಿಹೋಗುವ ಭೂಭಾಗಗಳ ರಕ್ಷಣೆಯಲ್ಲಿ ಕಾಂಡ್ಲಾಗಳ ಪಾತ್ರ ಮಹತ್ವದ್ದು. ತಮಿಳುನಾಡಿನ ಪಿಚ್ಚವರಂನಲ್ಲಿ ಕಾಂಡ್ಲಾಗಿಡಗಳು ಹಳ್ಳಿಗಳನ್ನು ಸುನಾಮಿ ಅಲೆಗಳ ಹೊಡೆತದಿಂದ ರಕ್ಷಿಸಿದ್ದವು.
ಈ ಸಸ್ಯಗಳು ಹೂವು ಹಣ್ಣುಗಳನ್ನು ನೀಡುವುದರಿಂದ ಕಾಂಡ್ಲಾ ಬೆಳೆಯುವ ಪ್ರದೇಶಗಳಲ್ಲಿ ಜೇನುಗಳ ಸಂಖ್ಯೆಯೂ ಅಧಿಕ. ಉರುವಲಿಗೆ, ಇದ್ದಿಲಿಗಾಗಿ, ಹಸಿರು ಸೊಪ್ಪಿಗಾಗಿ ಜನರು ಕಾಂಡ್ಲಾಗಿಡಗಳನ್ನೇ ಆಶ್ರಯಿಸಿದ್ದಾರೆ. ಕಾಂಡ್ಲಾ ಕೇವಲ ಭಾರತ ಮಾತ್ರವಲ್ಲ ಜಗತ್ತಿನ ಸುಮಾರು 118 ದೇಶಗಳಲ್ಲಿ ಕಂಡು ಬರುತ್ತವೆ. ಜುಲೈ 26 ಅನ್ನು ವಿಶ್ವ ಕಾಂಡ್ಲಾ ದಿನವನ್ನಾಗಿ ಆಚರಿಸಲಾಗುತ್ತದೆ.