ಜೀವನಯಾನ

Tuesday, June 18, 2013

ಮಾನಸ ಸರೋವರ

ಮಾನಸ ಸರೋವರ ಭಾರತ-ನೇಪಾಳ ಗಡಿಯಲ್ಲಿರುವ ಕೈಲಾಸ ಪರ್ವತದಲ್ಲಿದೆ. ಈ ಪ್ರದೇಶ ಚೀನಾದ ಸ್ವಾಯತ್ತ ಟಿಬೇಟ್ನ ಹಿಡಿತಕ್ಕೆ ಒಳಪಟ್ಟಿದೆ. ಇದು ಸಮುದ್ರ ಮಟ್ಟದಿಂದ 14950 ಅಡಿ ಉತ್ತರದಲ್ಲಿದೆ. ಜಗತ್ತಿನಲ್ಲಿಯೇ ಅತ್ಯಂತ ಶುದ್ಧ ನೀರಿಗೆ ಮಾನಸ ಸರೋವರ ವಿಖ್ಯಾತಿ ಪಡೆದಿದೆ. ಮಾನಸ ಸರೊವರ ಹಿಂದುಗಳ ಪವಿತ್ರ ನದಿ. ಇಲ್ಲಿಗೆ ಜೀವನದಲ್ಲಿ ಒಮ್ಮೆಯಾದರೂ ಹೋಗಬೇಕೆಂಬುದು ನಂಬಿಕೆ. ಪುರಾಣಕ್ಕಿಂತಲೂ ಹೆಚ್ಚಾಗಿ ತನ್ನ ನೈಸರ್ಗಿಕ ಸೌಂದರ್ಯಕ್ಕೆ ಮಾನಸ ಸರೋವರ ಪ್ರಸಿದ್ಧಿ.
 


ಯಾತ್ರಾರ್ಥಿಗಳ ಸ್ವರ್ಗ!
ಬ್ರಹ್ಮಪುತ್ರ, ಸಿಂಧು, ಗಂಗಾ, ಸಟ್ಲೆಜ್ ಈ ನಾಲ್ಕು ನದಿಗಳ ಉಗಮ ಸ್ಥಾನವೆನಿಸಿಕೊಂಡಿರುವುದು ಈ ಸರೋವರದ ಹೆಗ್ಗಳಿಕೆ. ಅಲ್ಲದೆ ಇದೊಂದು ಪ್ರಸಿದ್ಧ ಯಾತ್ರಾಸ್ಥಳವಾಗಿದ್ದು, ಪ್ರತಿವರ್ಷ ಲಕ್ಷಾಂತರ ಚಾರಣಿಗರು, ಸಾಹಸಿಗರು, ಧಾರ್ಮಿಕ ವ್ಯಕ್ತಿಗಳು ಮಾನಸ ಸರೋವರ ಯಾತ್ರೆ ಕೈಗೊಳ್ಳುತ್ತಾರೆ. ಮಾನಸ ಸರೋವರದಲ್ಲಿ ಸ್ನಾನ ಮಾಡುವುದರಿಂದ ಮತ್ತು ನೀರನ್ನು ಕುಡಿಯುವುದರಿಂದ ನಮ್ಮ ಪಾಪವೆಲ್ಲವೂ ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಇದೆ. ಯಾತ್ರಾಥರ್ಿಗಳ ಸ್ವರ್ಗ ಎಂದೇ ಇದನ್ನು ಕರೆಯಲಾಗುತ್ತದೆ.

ಸರೋವರದ ವಿಶೇಷತೆ:

ಈ ಸರೋವರ ಸುಮಾರು 88 ಕಿ.ಮೀ. ಸುತ್ತಳತೆ ಮತ್ತು 90 ಮೀಟರ್  ಆಳವಾಗಿದೆ.  ಚಳಿಗಾಲದಲ್ಲಿ ಇದರ ಮೇಲೈ ಸಂಪೂರ್ಣವಾಗಿ ಹೆಪ್ಪು ಗಟ್ಟಿರುತ್ತದೆ. ಹಿಂದು ಪುರಾಣಗಳ ಪ್ರಕಾರ ಮಾನಸ ಸರೋವರ ಶಿವನ ಆವಾಸ ಸ್ಥಾನ ಎನ್ನುವ ಪ್ರತೀತಿ ಇದೆ. ಅಲ್ಲದೆ ಬೌದ್ಧ ಧರ್ಮೀಯರೂ ಮಾನಸ ಸರೋವರದೊಂದಿಗೆ ಪವಿತ್ರ ಸಂಬಂಧ ಹೊಂದಿದ್ದಾರೆ.

 ಕೈಲಾಸ ಮಾನಸ ಸರೋವರ ಯಾತ್ರೆ:
ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ (ಹಿಮ ಕಡಿಮೆ  ಇರುವ ತಿಂಗಳನ್ನು ಪರಿಗಣಿಸಿ) ಭಾರತ ಸರ್ಕಾರ "ಕೈಲಾಸ ಮಾನಸ ಸರೋವರ ಯಾತ್ರೆ"  ಆಯೋಜಿಸುತ್ತದೆ. ಇದು ನಾವಿಚ್ಛಿಸಿದಂತೆ ಕೈಗೊಳ್ಳುವ ಯಾತ್ರೆಯಲ್ಲ. ಭಾರತ ವಿದೇಶಾಂಗ ಸಚಿವಾಲಯ "ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್" (ಐ.ಟಿ.ಬಿ.ಪಿ.) ನೇತೃತ್ವದಲ್ಲಿ ಈ ಯಾತ್ರೆ ನೆರವೇರಿಸಲಾಗುತ್ತದೆ. ಯಾತ್ರೆ ಕೈಗೊಳ್ಳುವವರು ಐ.ಟಿ.ಬಿ.ಪಿ. ಯಿಂದ ಪರೀಕ್ಷೆ ಎದುರಿಸಬೇಕು. ಯಾತ್ರಿಕರ ದೈಹಿಕ ಮಾನಸಿಕ ದೃಢತೆ ಮತ್ತು ಸಾಮಥ್ರ್ಯವನ್ನು ಪರಿಶೀಲಿಸಿ ಯಾತ್ರೆಯ ಸಮಯ ನಿಗದಿ ಪಡಿಸುತ್ತಾರೆ. ಯಾತ್ರೆಯ ಅವಧಿ 38 ದಿನಗಳು. ಯಾತ್ರೆಗೆ ವಿವಿಧ ತಂಡಗಳನ್ನು ರಚಿಸಲಾಗುತ್ತದೆ. ಈ ತಂಡದೊಂದಿಗೆ ಯಾತ್ರಾಥರ್ಿಗಳ ಜತೆ ಭದ್ರತಾ ಸಿಬ್ಬಂದಿ ನುರಿತ ವೈದ್ಯರು ಇರುತ್ತಾರೆ. ಯಾವ ತಂಡದಲ್ಲಿ ಹೋಗಬೇಕು ಎನ್ನುವ ವಿವರವನ್ನು ಕನಿಷ್ಠ 6 ತಿಂಗಳ ಮೊದಲೇ ತಿಳಿಸಲಾಗುತ್ತದೆ. ಯಾತ್ರೆಗೆ ಉಣ್ಣೆಯ ಕವಚ, ರೈನ್ ಕೋಟ್, ಹಿಮಪಾತ ತಡೆಯಬಲ್ಲ ಕೊಡೆ, ಮಂಜಿನ ಹೊಡೆತ ತಡೆಯಬಲ್ಲ ಕನ್ನಡಕ, ವಾಟರ್ ಪ್ರೂಫ್ ಶೂ, ಆಕ್ಸಿಜನ್ ಸಿಲಿಂಡರ್, ನಾಡಿ ಮಿಡಿತ ಪರೀಕ್ಷಿಸುವ ಪಲ್ಸ್ ಮೀಟರ್ ಮುಂತಾದ ಅವಶ್ಯಕ ಸಾಮಗ್ರಿಗಳನ್ನು ಹೊತ್ತೊಯ್ಯಬೇಕು.

ಚೀನಾ ತಕರಾರು: 
ಚೀನಾದ ಸೈನ್ಯ ಟಿಬೇಟನ್ನು ಆಕ್ರಮಿಸಿಸಿಕೊಂಡಿದ್ದರ ಪರಿಣಾಮವಾಗಿ 1949ರಿಂದ 1980ರವರೆಗೆ ವಿದೇಶಿ ಪ್ರವಾಸಿಗರು ಮಾನಸ ಸರೋವರಕ್ಕೆ ಭೇಟಿ ನೀಡುವುದಕ್ಕೆ ನಿಷೇಧ ಹೇರಲಾಗಿತ್ತು. ಬಳಿಕ ಭಾರತೀಯ ಪ್ರವಾಸಿಗರಿಗೆ ಮಾನಸ ಸರೋವರಕ್ಕೆ ತೆರಳಲು ಮುಕ್ತ ಅವಕಾಶ ಕಲ್ಪಿಸಲಾಯಿತು. ಈಗಲೂ ಭಾರತೀಯ ಯಾತ್ರಿಕರಿಗೆ ಚೀನಾದ ತಕರಾರು ಇದ್ದಿದ್ದೇ.

ದುರ್ಗಮ ಹಾದಿ:

ಮಾನಸ ಸರೋವರಕ್ಕೆ ತಲುಪಬೇಕೆಂದರೆ 52 ಕೀ. ಕೈಲಾಸ ಪರ್ವತದ ದುರ್ಗಮ ದಾರಿ ಕ್ರಮಿಸಬೇಕು. ಈ ಯಾತ್ರೆ ಉಳಿದ ಯಾತ್ರೆಯಷ್ಟು ಸುಲಭವಲ್ಲ. ದಿನಕ್ಕೆ ಕನಿಷ್ಠ 10 ಕಿ.ಮೀ. ನಡೆಯುವುದನ್ನು ಅಭ್ಯಾಸಮಾಡಿಕೊಳ್ಳಬೇಕು. ಇಷ್ಟೆಲ್ಲಾ ಸಾಹಸದ ಬಳಿಕ  ಮಾನಸ ಸರೋವರ ತಲುಪಿದ ಬಳಿಕ ಸ್ವರ್ಗವನ್ನೇ ಮುಟ್ಟಿದ ಹಿತಾನುಭವವಾಗುತ್ತದೆ. 2 ರಿಂದ 3ದಿನ ಇಲ್ಲಿ ಉಳಿಯಲು ಅವಕಾಶ ನೀಡಲಾಗತ್ತದೆ. ಸರೋವರದ ಎದುರಿನಲ್ಲಿ ಹಿಮದಿಂದ ಆವೃತವಾದ ಕೈಲಾಸ ಪರ್ವತದ ದರ್ಶನವಾಗುತ್ತದೆ. ತೀರದ ಸುತ್ತಲೂ ಅನೇಕ ದೇವಾಲಯಗಳಿವೆ. 

  



 

No comments:

Post a Comment