ಜೀವನಯಾನ

Monday, August 25, 2014

ಅಕ್ಬರ ಕಟ್ಟಿಸಿದ ಫತೇಪುರ್ ಸಿಕ್ರಿ

ಮುಘಲ್ ಸಂಸ್ಕೃತಿ ಮತ್ತು ನಾಗರಿಕತೆಗೆ ಸಾಕ್ಷಿಯಾಗಿ ನಿಂತಿದೆ ಉತ್ತರ ಪ್ರದೇಶದ ಆಗ್ರಾ ಸಮೀಪದಲ್ಲಿರುವ ಈ ಸ್ಮಾರಕ ಪಟ್ಟಣ. ಫತೇಪುರ್ ಸಿಕ್ರಿಯ ಸುತ್ತಮುತ್ತಲಿನ ಜಾಗ ಮೂಲತಃ ರಜಪೂತ ದೊರೆಗಳಿಗೆ ಸೇರಿದ್ದಾಗಿತ್ತು. 12 ನೇ ಶತಮಾನದಲ್ಲಿ ಇಲ್ಲಿ ದೇವಾಲಯಗಳು ಇದ್ದವು. ಬಳಿಕ ಈ ಪ್ರದೇಶ ಬಾಬರನ ಕೈ ವಶವಾಯಿತು. ನಂತರದಲ್ಲಿ ಚಕ್ರವರ್ತಿ  ಅಕ್ಬರ ಇಲ್ಲಿ ತನ್ನ ರಾಜಧಾನಿಯನ್ನು ನಿರ್ಮಿಸಿದ. ಆದರೆ, ಇಲ್ಲಿ ಅಕ್ಬರನ ದರ್ಬಾರ್ ನಡೆದಿದ್ದು 
ಕೆಲವೇ ವರ್ಷಗಳು ಮಾತ್ರ!

 
ಭೂತಗಳ ನಗರ:
ಸಾಂಪ್ರದಾಯಿಕ ರಾಜಧಾನಿಯಾಗಿ ಮಾತ್ರ ಉಪಯೋಗಿಸುತ್ತಿದ್ದುದರಿಂದ ಫತೇಪುರ್ ಸಿಕ್ರಿಗೆ ಹೆಚ್ಚಿನ ಕೋಟೆಗಳ ರಕ್ಷಣೆ ಇರಲಿಲ್ಲ. 1571ರಲ್ಲಿ ಅಕ್ಬರ ಫತೇಪುರ್ ಸಿಕ್ರಿಯನ್ನು ಕಟ್ಟಿಸಿದ. ಈ ಪಟ್ಟಣವು ಮೂರು ಕಿ.ಮೀ. ಉದ್ದ ಮತ್ತು ಒಂದು ಕಿ.ಮೀ.  ಅಗಲವಾಗಿದೆ. ಅನೇಕ ವರ್ಷಗಳ ಶ್ರಮದಿಂದ ಕಟ್ಟಲ್ಪಟ್ಟಿದ್ದರೂ ಫತೇಪುರ್ ಸಿಕ್ರಿ ಹೆಚ್ಚು ವರ್ಷಗಳ ಕಾಲ ಉಪಯೋಗಿಸಲ್ಪಡಲಿಲ್ಲ. 1585ರಲ್ಲಿ ನೀರಿನ ಕೊರತೆಯಿಂದಾಗಿ ಅಕ್ಬರ ತನ್ನ ದೆಹಲಿಗೆ ರಾಜಧಾನಿಯನ್ನು ವಗರ್ಾಯಿಸಿದ. ಹೀಗಾಗಿ ಇಲ್ಲಿ ಯಾರೂ ವಾಸಿಸದ ಕಾರಣಕ್ಕೆ ಅನೇಕ ಶತಮಾನಗಳ ಕಾಲ ಇದು ಭೂತಗಳ ನಗರ ಎಂದೇ ಕರೆಸಿಕೊಂಡಿತು. ಇಂದು ದೆಹಲಿಯಲ್ಲಿರುವ ಐತಿಹಾಸಿಕ ಸ್ಮಾರಕಗಳಲ್ಲಿ ಒಂದೆನಿಸಿದೆ. ಯುನೆಸ್ಕೋದ ವಿಶ್ವ ಪಾರಂಪರಿಕ ತಾಣವಾಗಿ ಫತೇಪುರ್ ಸಿಕ್ರಿ ಗುರುತಿಸಲ್ಪಟ್ಟಿದೆ.

ಇಂಡೊ- ಇಸ್ಲಾಮಿಕ್ ವಾಸ್ತು ಶಿಲ್ಪ:
ಅಕ್ಬರನ ವ್ಯಕ್ತಿತ್ವ ಮತ್ತು ಆದರ್ಶಗಳಿಂದ ಪ್ರಭಾವಿತವಾದ ಈ ನಗರ ವಿಶಿಷ್ಟವಾದ ವಿನ್ಯಾಸವನ್ನು ಹೊಂದಿದೆ. 
ಇಲ್ಲಿ ಕಂಡುಬರುವ ಅನೇಕ ಸ್ಮಾರಕಗಳನ್ನು ಕೆಂಪು ಕಲ್ಲಿನಿಂದ ಕಟ್ಟಲಾಗಿದೆ. ಹಿಂದು, ಇಂಡೊ- ಮುಸ್ಲಿಂ ಮತ್ತು ಪಷರ್ಿಯನ್ ಶೈಲಿಯ ವಾಸ್ತುಶಿಲ್ಪವನ್ನು ಬಿಂಬಿಸುತ್ತದೆ. ಇಲ್ಲಿನ ಕಟ್ಟಡಗಳಲ್ಲಿ ದಿವಾನ್ ಇ ಆಮ್,  ಸಾರ್ವಜನಿಕ ಪ್ರೇಕ್ಷಕರ ಸಭಾಂಗಣ, ದಿವಾನ್ ಇ ಖಾಸ್, ಬೀರಬಲ್ಲನ ಅರಮನೆ, ಪಂಚ ಮಹಲ್, ಜೋಧಾಬಾಯಿ ಅರಮನೆ, ಬುಲಂದ್ ದರ್ವಾಜಾ, ಜಾಮಾ ಮಸೀದಿ ಪ್ರಮುಖವಾದವುಗಳು.

  • ಪಂಚ ಮಹಲ್: ಸ್ತಂಬಾಕಾರದ 5 ಅಂತಸ್ತಿನ ರಚನೆಯಾಗಿದೆ. ಇದನ್ನು ರಾಜ ತನ್ನ ವಿರಾಮಕ್ಕಾಗಿ, ಮನೋರಂಜನೆಗಾಗಿ ಬಳಸುತ್ತಿದ್ದನು. ಈ ಅರಮನೆಯು ವಿಶೇಷವಾಗಿ ರಾಣಿಯರು ಮತ್ತು ರಾಜ ಕುಮಾರಿಯರಿಗೆ ಮೀಸಲಾಗಿತ್ತು.
  • ಬೀರ್ಬಲ್ಲನ ಅರಮನೆ: ಅಕ್ಬರನ ಮಂತ್ರಿ ಬೀರಬಲ್ಲನ ಅರಮನೆ ಮುಘಲರ ಮುಖ್ಯ ಅರಮನೆಗಳಲ್ಲಿ ಒಂದಾಗಿತ್ತು. ಈ ಅರಮನೆ ಹಿಂದು ಮತ್ತು ಮುಘಲ್ ಎರಡೂ ವಾಸ್ತುಶಿಲ್ಪವನ್ನು ಹೊಂದಿದೆ.
  • ಬುಲಂದ್ ದರ್ವಾಜಾ: ಜಾಮಾ ಮಸೀದಿಯ ಮುಖ್ಯ ದ್ವಾರಗಳಲ್ಲಿ ಒಂದು. ಹೊರಗಡೆಯಿಂದ ಬೃಹತ್ ಗಾತ್ರ- 55 ಮೀಟರ್ ಎತ್ತರವಾಗಿರುವ ಈ ದ್ವಾರ ಒಳಹೋದಂತೆ ಇನ್ನೊಂದು ಕಡೆಯಲ್ಲಿ ಮಾನವ ಗಾತ್ರಕ್ಕೆ ಇಳಿಯುತ್ತದೆ.
  • ಜೋಧಾಬಾಯಿ ಅರಮನೆ: ಅಕ್ಬರನ ಪಟ್ಟದ ರಾಣಿ ಜೋದಾಬಾಯಿಯ ಅರಮನೆ. ಒಂದು ಪ್ರಾಂಗಣದ ಸುತ್ತ ಕಟ್ಟಲ್ಪಟ್ಟಿರುವ ಈ ಅರಮನೆಯಲ್ಲಿ ಗುಜರಾತಿ ಪ್ರಭಾವವನ್ನು ಕಾಣಬಹುದು.
  • ಸಂತ ಸಲೀಂ ಚಿಸ್ತಿ: ಸಂತ ಶೇಕ್ ಸಲೀಂ ಚಿಸ್ತಿಯು ಅಕ್ಬರನಿಗೆ ಮಗ ಹುಟ್ಟುತ್ತಾನೆ ಎಂದು ಭವಿಷ್ಯ ನುಡಿದಿದ್ದು ಇಲ್ಲಿಯೇ ಎನ್ನವ ಪ್ರತೀತಿ ಇದೆ. ಹೀಗಾಗಿ ಫತೇಪುರ್ ಸಿಕ್ರಿಯಲ್ಲಿ ಆತನ ಸಮಾಧಿಯನ್ನು ನಿರ್ಮಿಸಲಾಗಿದೆ. ಇಲ್ಲಿ ಮಕ್ಕಳಿಲ್ಲದ ನೂರಾರು ಮಹಿಳೆಯರಿ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ.
  • ಜಾಮಾ ಮಸೀದಿ: ವಿಶ್ವ ಪ್ರಸಿದ್ಧ ಜಾಮಾ ಮಸೀದಿಯೂ ಫತೇಪುರ ಸಿಕ್ರಿಯಲ್ಲಿದೆ. ಇದು ಭಾರತದಲ್ಲಿಯೇ ಅತಿ ದೊಡ್ಡ ಮತ್ತು ವ್ಯವಸ್ಥಿತವಾಗಿ ಕಟ್ಟಲಾದ ಮಸೀದಿಯಾಗಿದೆ.


No comments:

Post a Comment